ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನೆ

By Staff
|
Google Oneindia Kannada News

ಶಿವಸೇನೆ Vs ರಕ್ಷಣಾವೇದಿಕೆ : ವಾರ್‌ ಅಂಡ್‌ ಪೀಸ್‌
ಸದ್ಯದಲ್ಲಿಯೇ ಹುಬ್ಬಳ್ಳಿಯಲ್ಲಿ ಶಿವಸೇನೆ ಕಾರ್ಯಕರ್ತರ ಬೃಹತ್‌ ಸಮಾವೇಶ -ಮುತಾಲಿಕ್‌

ಬೆಂಗಳೂರು : ನಗರದಲ್ಲಿ ನಡೆದ ಶಿವಸೇನೆ ಕಾರ್ಯಕರ್ತರ ಮೊದಲ ಸಮಾವೇಶದಲ್ಲಿಯೇ ಹಿಂಸೆ ಸ್ಫೋಟಿಸಿದೆ. ಸಮಾವೇಶದ ಸಂದರ್ಭದಲ್ಲಿ ನಡೆದ ಪುಟ್ಟ ಗಲಭೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ನಗರದ ಗವಿಪುರಂ ಸಭಾಂಗಣದಲ್ಲಿ ಸಮಾವೇಶದ ಉದ್ಘಾಟನೆಗೆ ಮುನ್ನವೇ ಎದ್ದು ನಿಂತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ರಾಜ್ಯದಲ್ಲಿ ಶಿವಸೇನೆ ಸ್ಥಾಪಿಸುತ್ತಿರುವ ನಿಮ್ಮ ಉದ್ದೇಶ ಏನು? ಬೆಳಗಾವಿ ಗಡಿವಿವಾದದ ಬಗ್ಗೆ ನಿಮ್ಮ ನಿಲುವೇನು ? ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲಾದ ಹಲ್ಲೆಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನೆಗಳ ಮಳೆ ಸುರಿಸಿದರು.

ಶಿವಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರಿಗೆ ಮುತ್ತಿಗೆ ಹಾಕಿದ ರಕ್ಷಣಾ ವೇದಿಕೆಯ ಪ್ರವೀಣ್‌ ಕುಮಾರ್‌ಶೆಟ್ಟಿ ಮತ್ತಿತರರು ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು. ಈ ಮಧ್ಯೆ, ಶಿವಸೇನೆ ಕಾರ್ಯಕರ್ತರು ಭಾರತ್‌ಮಾತಾಕಿ ಜೈ, ಶಿವಾಜಿ ಮಹಾರಾಜ್‌ಕಿ ಜೈ ಎಂದು ಘೋಷಣೆ ಹಾಕಿದಾಗ ಪುಟ್ಟ ಘರ್ಷಣೆ ನಡೆಯಿತು.

ರಕ್ಷಣಾ ವೇದಿಕೆ ಕಾರ್ಯ ಕರ್ತರನ್ನು ಸಮಾಧಾನಪಡಿಸಿದ ಮುತಾಲಿಕ್‌, ಶಿವಸೇನೆ ಸ್ಥಾಪಿಸಿರುವುದು ಹಿಂದುತ್ವ ಉಳಿಸುವುದಕ್ಕಾಗಿ ಮಾತ್ರ. ಬೆಳಗಾವಿಯಿರಲಿ ಕರ್ನಾಟಕ ಒಂದಿಂಚೂ ಜಾಗವೂ ಕದಲದಂತೆ ಕಾಯುವುದಾಗಿ ಭರವಸೆ ನೀಡಿದರು.

ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲಾದ ಹಲ್ಲೆಗೆ ಸಂಬಂಧಿಸಿದಂತೆ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಅವರಿಂದ ಕ್ಷಮಾಪಣೆ ಕೇಳಿಸುವುದಾಗಿ ಮುತಾಲಿಕ್‌ ಹೇಳಿದರು. ನಂತರ ಸಮಾವೇಶ ಸುಸೂತ್ರವಾಗಿ ನಡೆಯಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X