ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಎಚ್ಐವಿ ಸೋಂಕು ಉದ್ಯೋಗಕ್ಕೆ ಅನರ್ಹತೆಯಲ್ಲ’
‘ಎಚ್ಐವಿ
ಸೋಂಕು
ಉದ್ಯೋಗಕ್ಕೆ
ಅನರ್ಹತೆಯಲ್ಲ’
ಶಿವಮೊಗ್ಗದ
ರಮೇಶ್
ಕುಮಾರ್
ಹೋರಾಟಕ್ಕೆ
ದಕ್ಕಿದ
ನ್ಯಾಯ,
ಕೆಎಟಿಯಿಂದ
ಮಹತ್ವದ
ತೀರ್ಪು
ಸರ್ಕಾರಿ ನೌಕರಿ ಹೊಂದಲು ಎಚ್ಐವಿ ಸೋಂಕು ಉಳ್ಳವರೂ ಅರ್ಹತೆ ಪಡೆದಿದ್ದಾರೆ. ಎಚ್ಐವಿ ಪೀಡಿತರೆಂದು ನೌಕರಿ ನಿರಾಕರಿಸುವಂತಿಲ್ಲ ಎಂದು ನ್ಯಾಯಮಂಡಳಿ ತೀರ್ಪು ನೀಡಿದೆ.
ಶಿವಮೊಗ್ಗ ಜಿಲ್ಲೆಯ ಸಿವಿಲ್ ಪೊಲೀಸ್ ನೇಮಕಾತಿಗೆ ಸಂಬಂಧಿಸಿದಂತೆ ಆರ್. ರಮೇಶ್ರಾವ್ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಎ.ವಿ. ಶ್ರೀನಿವಾಸರೆಡ್ಡಿ ಮತ್ತು ಸದಸ್ಯ ಪಿ. ಕೋಟಿಲಿಂಗನಗೌಡ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ರಮೇಶ್ರಾವ್ ಅವರನ್ನು ಎಚ್ಐವಿ ಸೋಂಕಿನ ಹಿನ್ನೆಲೆಯಲ್ಲಿ ಪೊಲೀಸ್ ಹುದ್ದೆಗೆ ಅನರ್ಹರೆಂದು ಘೋಷಿಸಿ, ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಅವರ ಆಯ್ಕೆಯನ್ನು ರದ್ದುಪಡಿಸಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ರಮೇಶ್ರಾವ್ ಕೆಎಟಿ ಮೊರೆ ಹೋಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, September 9, 2005, 23:53 [IST]