ಹಾಸನ ಅಹಿಂದ ಸಮಾವೇಶಕ್ಕೆ ಕಾಂಗ್ರೆಸ್ ದಂಡು!
ಹಾಸನ
ಅಹಿಂದ
ಸಮಾವೇಶಕ್ಕೆ
ಕಾಂಗ್ರೆಸ್
ದಂಡು!
ಸೆ.26ರ
ಅಹಿಂದ
ಸಮಾವೇಶದಲ್ಲಿ
ಪಾಲ್ಗೊಳ್ಳುವುದು
ಖಚಿತ-
ಜಿ.ಪುಟ್ಟಸ್ವಾಮಿ
ಗೌಡ
ಅಹಿಂದ ಸಮಾವೇಶಗಳ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಅತೃಪ್ತಿ ಪ್ರಕಟಿಸುತ್ತಿರುವ ಬೆನ್ನಲ್ಲಿಯೇ, ಅವರ ತವರಿನಲ್ಲಿ ಅಹಿಂದ ಸಮಾವೇಶಕ್ಕೆ ಸಿದ್ಧತೆಗಳು ನಡೆದಿವೆ. ಮಾಜಿ ಸಚಿವ ಎಚ್.ಸಿ.ಶ್ರೀಕಂಠಯ್ಯ, ವಾರ್ತಾ ಸಚಿವ ಬಿ.ಶಿವರಾಂ ಅವರ ಅನೇಕ ಬೆಂಬಲಿಗರು ಅಹಿಂದ ಸಮಾವೇಶದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಹಿಂದ ಸಮಾವೇಶದ ಯಶಸ್ಸಿಗಾಗಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಜಿ. ಪುಟ್ಟಸ್ವಾಮಿ ಗೌಡ, ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ. ಮಂಜು, ದಲಿತ ಮುಖಂಡ ಬಿ.ವಿ. ಚಂದ್ರಪ್ರಸಾದ್ ತ್ಯಾಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ. ಕೃಷ್ಣಪ್ರಸಾದ್, ಸಕಲೇಶಪುರದ ಕಾಂಗ್ರೆಸ್ ಮುಖಂಡ ಯಜಮಾನ್ಗೌಡ, ಜಿಲ್ಲಾ ಕಾಂಗ್ರೆಸ್ ಪ್ರಭಾರಿ ಅಧ್ಯಕ್ಷ ಕುಮಾರಸ್ವಾಮಿ, ಗಂಡಸಿ ಕ್ಷೇತ್ರದ ಮಾಜಿ ಶಾಸಕ ಈ. ನಂಜೇಗೌಡ ಮತ್ತಿತರರು ಪಾಲ್ಗೊಂಡಿದ್ದರು.
ಅಹಿಂದ ಸಮಾವೇಶದಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ಜರುಗಿಸುವುದಾಗಿ ತುಮಕೂರಿನಲ್ಲಿ ನಡೆದ ಅಹಿಂದ ಸಮಾವೇಶದ ನಂತರ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದರು. ಹೀಗಾಗಿ ರಾಜ್ಯ ರಾಜಕೀಯದ ಮೇಲೆ ಅಹಿಂದ ಗಂಭೀರ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರಗಳು ಕೇಳಿ ಬರುತ್ತಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು