ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಾಯಕನ ವಿಗ್ರಹ ಭಗ್ನ : ರಾಜ್ಯದ ಕೆಲವೆಡೆ ಹಿಂಸೆ

By Staff
|
Google Oneindia Kannada News

ವಿನಾಯಕನ ವಿಗ್ರಹ ಭಗ್ನ : ರಾಜ್ಯದ ಕೆಲವೆಡೆ ಹಿಂಸೆ
ದೊಡ್ಡಬಳ್ಳಾಪುರದಲ್ಲಿ ಓರ್ವನ ಸಾವು, ವರ್ತೂರು ಉದ್ವಿಗ್ನ

ಬೆಂಗಳೂರು : ಸ್ವಾತಂತ್ರ್ಯಹೋರಾಟದಲ್ಲಿ ಕೋಮು ಸೌಹಾರ್ದತೆಯ ಸಂಕೇತವಾಗಿದ್ದ ಗಣೇಶೋತ್ಸವ ಪ್ರಸ್ತುತ ದಾರಿ ತಪ್ಪುತ್ತಿದೆ. ರಾಜ್ಯದ ಕೆಲವೆಡೆ ಗಣೇಶೋತ್ಸವವನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡ ಪ್ರಕರಣಗಳು ವರದಿಯಾಗಿವೆ.

ಕಿಡಿಗೇಡಿಗಳು ಬೆಂಗಳೂರು ಹೊರವಲಯದ ವರ್ತೂರಿನಲ್ಲಿ ಗಣೇಶ ವಿಗ್ರಹವನ್ನು ಭಗ್ನ ಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಾಂಧಿ ವೃತ್ತದಲ್ಲಿ ಇಲ್ಲಿನ ಶ್ರೀರಾಮ ಯುವಕ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದನ್ನು ಖಂಡಿಸಿ ಸಾರ್ವಜನಿಕರು ರಸ್ತೆ ತಡೆ ಮೂಲಕ ಪ್ರತಿಭಟಿಸಿದ್ದಾರೆ.

ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಗಣೇಶೋತ್ಸವದ ಹಿನ್ನೆಲೆ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದು ಒಬ್ಬ ಮೃತಪಟ್ಟಿದ್ದಾನೆ. ಬೆಳಗಾವಿಯಲ್ಲಿ ಗಣೇಶೋತ್ಸವ ಕಿಡಿಗೇಡಿಗಳಿಂದ ಹಿಂಸೆಗೆ ತಿರುಗಿದ್ದು, ಕಲ್ಲುತೂರಾಟ ನಡೆದ ಬಗ್ಗೆ ವರದಿಗಳು ಬಂದಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X