ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಕುಮಾರ್‌ ಸೇರಿದಂತೆ ನಾಲ್ವರಿಗೆ ‘ರಮಣ ಶ್ರೀ’

By Staff
|
Google Oneindia Kannada News

ಕೃಷ್ಣಕುಮಾರ್‌ ಸೇರಿದಂತೆ ನಾಲ್ವರಿಗೆ ‘ರಮಣ ಶ್ರೀ’
ನ.17ರಂದು ಶರಣ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ವಿತರಣಾ ಸಮಾರಂಭ

ಮೈಸೂರು : ಖ್ಯಾತ ಕವಿ ಡಾ. ಸಿ.ಪಿ. ಕೃಷ್ಣ ಕುಮಾರ್‌ ಸೇರಿದಂತೆ ನಾಲ್ವರಿಗೆ ಪ್ರಸಕ್ತ ಸಾಲಿನ ರಮಣಶ್ರೀ ಶರಣ ಪ್ರಶಸ್ತಿ ಸಂದಿದೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಶರಣ ಸಾಹಿತ್ಯ ಸಂಶೋಧನೆ, ಆಧುನಿಕ ವಚನ ರಚನೆ, ವಚನ ಸಂಗೀತ ಮತ್ತು ಶರಣ ಸಂಸ್ಕೃತಿ ಸಂಘಟನೆಯ ನಾಲ್ಕು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿಯು ತಲಾ 25ಸಾವಿರ ರೂ. ನಗದನ್ನು ಒಳಗೊಂಡಿದೆ. ನವೆಂಬರ್‌ 17ರಂದು ಪ್ರಶಸ್ತಿ ವಿತರಿಸುವುದಾಗಿ ಪ್ರಕಟಣೆಯಲ್ಲಿ ಪರಿಷತ್ತು ತಿಳಿಸಿದೆ.

ಪ್ರಶಸ್ತಿ ವಿಜೇತರ ವಿವರ :

ಸಿ.ಪಿ. ಕೃಷ್ಣ ಕುಮಾರ್‌(ಆಧುನಿಕ ವಚನ ರಚನೆ)
ಎಸ್‌. ಶಿವಣ್ಣ (ಸಂಶೋಧನೆ)
ಪಂಡಿತ ಪಂಚಾಕ್ಷರಿ ಮತ್ತಿಗಟ್ಟಿ (ವಚನ ಸಂಗೀತ)
ದಾವಣಗೆರೆಯ ಅಕ್ಕಮಹಾದೇವಿ ಸಮಾಜ(ಸಂಘಟನೆ)

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X