ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸಿಂಗ್‌ ಪುತ್ರನ ಆರತಕ್ಷತೆಯಲ್ಲಿ ಗಣ್ಯರ ದಂಡು

By Staff
|
Google Oneindia Kannada News

ಧರ್ಮಸಿಂಗ್‌ ಪುತ್ರನ ಆರತಕ್ಷತೆಯಲ್ಲಿ ಗಣ್ಯರ ದಂಡು
ಅಜಯ್‌ಕುಮಾರ್‌ ಸಿಂಗ್‌ ಆರತಕ್ಷತೆಗೆ ಭೈರೋನ್‌ ಸಿಂಗ್‌ ಶೇಖಾವತ್‌, ಶೀಲಾ ದೀಕ್ಷಿತ್‌...

ಬೆಂಗಳೂರು : ಸುರಿಯುವ ಮಳೆಯ ನಡುವೆಯೇ ನಗರದ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಪುತ್ರ ಡಾ। ಅಜಯ್‌ಕುಮಾರ್‌ ಸಿಂಗ್‌ ಅವರ ವಿವಾಹ ಆರತಕ್ಷತೆ ಸಮಾರಂಭ ಭಾನುವಾರ ರಾತ್ರಿ ಅದ್ಧೂರಿಯಿಂದ ಜರುಗಿತು.

ಉಪ ರಾಷ್ಟ್ರಪತಿ ಭೈರೋನ್‌ ಸಿಂಗ್‌ ಶೇಖಾವತ್‌, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌, ಆಂಧ್ರ ಮುಖ್ಯಮಂತ್ರಿ ವೈ. ಎಸ್‌. ರಾಜಶೇಖರ ರೆಡ್ಡಿ, ಮಹಾರಾಷ್ಟ್ರ ಮುಖ್ಯ ಮಂತ್ರಿ ವಿಲಾಸ್‌ರಾವ್‌ ದೇಶ್‌ ಮುಖ್‌, ಪಾಂಡಿಚೇರಿ ಮುಖ್ಯಮಂತ್ರಿ ರಂಗಸ್ವಾಮಿ, ಕೇಂದ್ರ ಸಚಿವರಾದ ಜೈಪಾಲ್‌ರೆಡ್ಡಿ, ನಟವರ್‌ಸಿಂಗ್‌, ಟಿ. ಆರ್‌. ಬಾಲು, ಆಸ್ಕರ್‌ ಫರ್ನಾಂಡಿಸ್‌ ಸೇರಿದಂತೆ ವಿವಿಧ ಗಣ್ಯರು ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.

ಸಚಿವ ಸಂಪುಟದ ದಂಡು, ವಿವಿಧ ಪಕ್ಷಗಳ ಮುಖಂಡರು ನವ ವಧುವರರಿಗೆ ಶುಭ ಕೋರಿದರು. ಅರಮನೆ ಮೈದಾನದಲ್ಲಿ ವರುಣನಿಗೆ ಸಡ್ಡು ಹೊಡೆಯುವಂತೆ ಬೃಹತ್‌ ಪೆಂಡಾಲ್‌ ಎದ್ದು ನಿಂತಿತ್ತು. ಮದುವೆಗಿಂತಲೂ ಒಂದು ಕೈ ಮುಂದೆಯೇ ಎನ್ನುವಂತೆ ಆರತಕ್ಷತೆಯ ಊಟೋಪಚಾರಗಳು ರುಚಿಯಾಗಿದ್ದವು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X