ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ರೀನಾ ಸಂತ್ರಸ್ತರಿಗೆ ಭಾರತದಿಂದ 5ದ.ಲ.ಡಾಲರ್‌

By Staff
|
Google Oneindia Kannada News

ಕತ್ರೀನಾ ಸಂತ್ರಸ್ತರಿಗೆ ಭಾರತದಿಂದ 5ದ.ಲ.ಡಾಲರ್‌
ಕೇರಳ ಮತ್ತು ತಮಿಳುನಾಡು ಪ್ರವಾಸದಲ್ಲಿ ಮನಮೋಹನ್‌ ಸಿಂಗ್‌

ತಿರುವನಂತಪುರಂ : ಅಮೆರಿಕಾದ ನ್ಯೂಒರ್ಲಿನ್ಸ್‌ನಲ್ಲಿ ಕತ್ರೀನಾ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗೆ ಭಾರತ ಕೈಜೋಡಿಸಿದ್ದು, 5ದಶಲಕ್ಷ ಡಾಲರ್‌ ಆರ್ಥಿಕ ನೆರವು ನೀಡಿದೆ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಶನಿವಾರ ಪ್ರಕಟಿಸಿದ್ದಾರೆ.

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿರುವ ಪ್ರಧಾನಿಗಳ ಮಾಧ್ಯಮ ಸಲಹೆಗಾರ ಸಂಜಯ್‌ ಬರು, ಪರಿಹಾರ ಕಾರ್ಯಕ್ಕಾಗಿ ಅಮೆರಿಕಾ ರೆಡ್‌ಕ್ರಾಸ್‌ ಸಂಸ್ಥೆಗೆ ನೇರವಾಗಿ ಭಾರತ ನೆರವು ನೀಡಿದೆ ಎಂದಿದ್ದಾರೆ.

ಪ್ರಧಾನಿ ಮನಮೋಹನ್‌ ಸಿಂಗ್‌ ಪ್ರಸ್ತುತ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳ ಸಲುವಾಗಿ ಪ್ರವಾಸ ಕೈಗೊಂಡಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X