ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯೋ ನಾ ಫೇಲಾದೆ! ವಿದ್ಯಾರ್ಥಿನಿಯರ ಆತ್ಮಹತ್ಯೆ

By Staff
|
Google Oneindia Kannada News

ಅಯ್ಯೋ ನಾ ಫೇಲಾದೆ! ವಿದ್ಯಾರ್ಥಿನಿಯರ ಆತ್ಮಹತ್ಯೆ
ಎಂಜಿನಿಯರಿಂಗ್‌ ಪರೀಕ್ಷೆ ಫಲಿತಾಂಶ ಸಾವಿನ ಮನೆ ದಾರಿ ತೋರಿಸಿತು!

ಬೆಂಗಳೂರು : ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ, ಹೈಕೋರ್ಟ್‌ ನ್ಯಾಯಮೂರ್ತಿಯಾಬ್ಬರ ಪುತ್ರಿಯೂ ಸೇರಿದಂತೆ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಗರದಲ್ಲಿ ನಡೆದಿದೆ.

ಸಿಎಂಆರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿದ್ಯಾಸಂಸ್ಥೆಯ ಬಯೋಟೆಕ್‌ ಎಂಜಿನಿಯರಿಂಗ್‌ ಪದವಿಯ ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಪುತ್ರಿ ನಿಯೋಲಿನಾ(20), ಗಾಂಧಿನಗರದ ನಿವಾಸಿಯಾದ ವಕೀಲ ಗಣೇಶ ಅವರ ಪುತ್ರಿ ನಿವೇದಿತಾ(18) ಮತ್ತು ಆರೋಗ್ಯ ಇಲಾಖೆಯ ಗುಮಾಸ್ತರಾದ ನರಸಿಂಹಯ್ಯ ಅವರ ಪುತ್ರಿ ಶೃತಿ (19) ಆತ್ಮಹತ್ಯೆಗೆ ಶರಣಾದ ನತದೃಷ್ಟ ವಿದ್ಯಾರ್ಥಿಗಳು.

‘ಪರೀಕ್ಷೆಯೇ ಬದುಕಲ್ಲ , ಬದುಕು ಇದ್ದರೆ ಎಷ್ಟು ಪರೀಕ್ಷೆಗಳನ್ನು ಬೇಕಾದರೂ ಗೆಲ್ಲಬಹುದು’ ಎನ್ನುವುದನ್ನು ನಮ್ಮ ವಿದ್ಯಾರ್ಥಿಗಳು, ಅದಕ್ಕಿಂತ ಮಿಗಿಲಾಗಿ ಪೋಷಕರು ಅರ್ಥಮಾಡಿಕೊಳ್ಳುವ ತನಕ ಇಂತಹ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಈ ಸಾವು ನ್ಯಾಯವೇ?
(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X