ಚುಂಚನಗಿರಿ ಶ್ರೀಗಳು ಮತ್ತು ಸಿದ್ದು ನಡುವೆ ಗುಸುಗುಸು
ಚುಂಚನಗಿರಿ
ಶ್ರೀಗಳು
ಮತ್ತು
ಸಿದ್ದು
ನಡುವೆ
ಗುಸುಗುಸು
ಸಾಮಾಜಿಕ
ನ್ಯಾಯವನ್ನು
ಎತ್ತಿಹಿಡಿಯುವವರನ್ನು
ನಾವು
ಬೆಂಬಲಿಸುತ್ತೇವೆ
-ಶ್ರೀ
ಬಾಲಗಂಗಾಧರನಾಥ
ಸ್ವಾಮಿ
ಸುಮಾರು 45 ನಿಮಿಷಗಳ ಕಾಲ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠದಲ್ಲಿ ಮಾತುಕತೆ ನಡೆದಿದ್ದು, ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ. ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಇದು ರಾಜಕೀಯ ಭೇಟಿಯಲ್ಲ, ಶ್ರೀಗಳ ಆರ್ಶೀವಾದ ಪಡೆಯಲು ಬಂದಿದ್ದಾಗಿ ತಿಳಿಸಿದ್ದಾರೆ.
ಹಾಸನದಲ್ಲಿ ಈ ತಿಂಗಳ 26ರಂದು ಅಹಿಂದ ಸಮಾವೇಶ ನಡೆಸಲು ಯೋಚಿಸುತ್ತಿದ್ದೇವೆ. ನಂತರ ಗುಲ್ಬರ್ಗದಲ್ಲಿಯೂ ನಡೆಸಲಾಗುವುದು. ಸಾಮಾಜಿಕ ನ್ಯಾಯಕ್ಕಾಗಿ ನಡೆಸಲಾಗುತ್ತಿರುವ ಪಕ್ಷರಹಿತ ಅಹಿಂದ ಚಳವಳಿಯನ್ನು ಶ್ರೀಗಳು ಬೆಂಬಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಗಂಗಾಧರನಾಥ ಸ್ವಾಮೀಜಿ, ನಾವು ಯಾರಿಂದಲೂ ಅಂತರ ಕಾಯ್ದುಕೊಳ್ಳುವುದಿಲ್ಲ. ಹತ್ತಿರ ಬಂದವರನ್ನು ಪ್ರೀತಿಸುತ್ತೇವೆ ಎಂದು ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರನ್ನು ಕುರಿತು ಮಾರ್ಮಿಕವಾಗಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು