ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಹತ್ತಿದ ಶಾಸಕ!

By Staff
|
Google Oneindia Kannada News

ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಹತ್ತಿದ ಶಾಸಕ!
ಧರ್ಮಸಿಂಗ್‌ ಪುತ್ರನ ಅದ್ಧೂರಿ ಮದುವೆಯ ಬೆನ್ನಲ್ಲಿಯೇ ಇಲ್ಲೊಂದು ಅರ್ಥಪೂರ್ಣ ಮದುವೆ

ಕಾರ್ಕಳ : ಸಾಮೂಹಿಕ ವಿವಾಹಗಳ ಬಗ್ಗೆ ಮಣಗಟ್ಟಲೇ ಭಾಷಣ ಬಿಗಿಯುವ ರಾಜಕಾರಣಿಗಳು ಸೇರಿದಂತೆ ಪ್ರತಿಷ್ಠಿತ ವರ್ಗ, ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಿಂದ ನಡೆಸುತ್ತಾರೆ. ಇಂತಹ ದ್ವಂದ್ವಗಳಿಗೆ ಅಪವಾದ ಶಾಸಕ ಸುನಿಲ್‌ ಕುಮಾರ್‌.

ಆದರ್ಶ ಹೇಳುವುದಕ್ಕಿಂತಲೂ ಆದರ್ಶವಾಗುವುದರಲ್ಲಿಯೇ ಅರ್ಥವಿದೆ ಎನ್ನುವ ಮನೋಭಾವದಿಂದ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌, ತಮ್ಮ ಮದುವೆಗೆ ಸಾಮೂಹಿಕ ವಿವಾಹವನ್ನು ಬಳಸಿಕೊಂಡಿದ್ದಾರೆ.

ವಿಶ್ವ ಹಿಂದು ಪರಿಷತ್‌ವತಿಯಿಂದ ಆಯೋಜಿಸಲಾಗಿದ್ದ ಕಾರ್ಕಳದ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಆಯೋಜಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಸುನಿಲ್‌ ಕುಮಾರ್‌ ಅವರು ಪ್ರಿಯಾಂಕ ಅವರನ್ನು ವರಿಸಿದರು. ಈ ಸಂದರ್ಭದಲ್ಲಿ 21ನವಜೋಡಿಗಳು ದಾಂಪತ್ಯವನ್ನು ಪ್ರವೇಶಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜಗದೀಶ್‌ ಶೆಟ್ಟರ್‌, ಶಂಕರ ಮೂರ್ತಿ, ಬಿ.ಎಸ್‌.ಯಡಿಯೂರಪ್ಪ, ಡಿ.ಸಿ. ಶ್ರೀಕಂಠಪ್ಪ ಕೃಷ್ಣ ಬೈರೇಗೌಡ, ಕಾಗೋಡು ತಿಮ್ಮಪ್ಪ , ಪ್ರಮೋದ್‌ ಮುತಾಲಿಕ್‌, ನೆ.ಲ. ನರೇಂದ್ರಬಾಬು ಮತ್ತಿತರರು ನವ ದಂಪತಿಗಳಿಗೆ ಶುಭ ಕೋರಿದರು.
(ಇನ್ಫೋ ವಾರ್ತೆ)

ಮದುವೆ ಮನೆಗೆ ಸ್ವಾಗತ :
ಅಬ್ಬಬ್ಬಾ! ಎನ್ನುವಂತಿತ್ತು ‘ಧರ್ಮ’ ಪುತ್ರನ ವಿವಾಹ
ಧರ್ಮಸಿಂಗ್‌ ಮಗನ ಮದುವೆಗೆ ಸಜ್ಜಾದ ಗುಲ್ಬರ್ಗ
ಅಗ್ನಿಸಾಕ್ಷಿಗೆ ಬದಲು ಮನಸ್ಸಾಕ್ಷಿ - ಹೀಗೊಂದು ಮದುವೆ

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X