ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂ.ಪ.ನಾಗರಾಜಯ್ಯಗೆ ಶಂ.ಬಾ. ಜೋಶಿ ಪ್ರಶಸ್ತಿ

By Staff
|
Google Oneindia Kannada News

ಹಂ.ಪ.ನಾಗರಾಜಯ್ಯಗೆ ಶಂ.ಬಾ. ಜೋಶಿ ಪ್ರಶಸ್ತಿ
ಬುಧವಾರ ಕರ್ನಾಟಕ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ

ಶಿವಮೊಗ್ಗ : ಭಾಷಾ ವಿದ್ವಾಂಸ ಹಾಗೂ ಇತಿಹಾಸ ತಜ್ಞ ಡಾ.ಹಂ.ಪ.ನಾಗರಾಜಯ್ಯ ಅವರನ್ನು ಶಿವಮೊಗ್ಗ ಕರ್ನಾಟಕ ಸಂಘ ಪ್ರಸಕ್ತ ಸಾಲಿನ ಡಾ.ಶಂ.ಬಾ.ಜೋಶಿ ಪ್ರಶಸ್ತಿಗೆ ಆಯ್ಕೆಮಾಡಿದೆ.

ನಗರದ ಕರ್ನಾಟಕ ಸಂಘ ಭವನದಲ್ಲಿ ಬುಧವಾರ ಸಂಜೆ 5.30ಕ್ಕೆ ಆಯೋಜಿಸಲಾಗಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗರಾಜಯ್ಯ ಅವರು, ಸಂಘದ ಅಧ್ಯಕ್ಷ ಪ್ರೊ.ಪಾಂಡುರಂಗ ಉಡುಪ ಅವರಿಂದ ಪ್ರಶಸ್ತಿ ಸ್ವೀಕರಿಸುವರು.

ಭಾಷಾ ವಿಜ್ಞಾನ, ಗ್ರಂಥ ಸಂಪಾದನೆ, ಪ್ರಬಂಧ ಸಂಕಲನ, ಜೀವನ ಚರಿತ್ರೆ ಸೇರಿದಂತೆ 60ಕ್ಕೂ ಅಧಿಕ ಕೃತಿಗಳಿಂದ ಸಾಹಿತ್ಯ ಲೋಕದಲ್ಲಿ ಗುರ್ತಿಸಿಕೊಂಡಿರುವ ನಾಗರಾಜಯ್ಯ, ನಾಡು-ನುಡಿಗೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X