ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಆಲಂಗೂರ್‌ ಶ್ರೀನಿವಾಸ್‌ ಬಂಧನ ಸನ್ನಿಹಿತವೇ?

By Staff
|
Google Oneindia Kannada News

ಸಚಿವ ಆಲಂಗೂರ್‌ ಶ್ರೀನಿವಾಸ್‌ ಬಂಧನ ಸನ್ನಿಹಿತವೇ?
2003ರಲ್ಲಿ ನಡೆದ ಪ್ರಕರಣಕ್ಕೆ ಮರುಜೀವ, ಸಚಿವರ ಜೊತೆ 53 ಜನರಿಗೆ ವಾರಂಟ್‌

ಮುಳಬಾಗಿಲು : ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಸಚಿವ ಆಲಂಗೂರು ಶ್ರೀನಿವಾಸ್‌ ಅವರ ಬಂಧನಕ್ಕೆ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ.

ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿದ್ದು, ಸಚಿವರ ಜೊತೆಗೆ 53 ಜನರಿಗೂ ಸಹ ವಾರಂಟ್‌ ನೀಡಿದೆ.

2003ರಲ್ಲಿ ವಿದ್ಯುತ್‌ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಜೆಡಿಎಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ, ಆಗಿನ ತಹಸೀಲ್ದಾರ್‌ ಕೃಷ್ಣಪ್ಪ ಅವರ ಮೇಲೆ ಅಲಂಗೂರು ಶ್ರೀನಿವಾಸ್‌ ನೇತೃತ್ವದ ಉದ್ರಿಕ್ತ ಗುಂಪು ಹಲ್ಲೆ ನಡೆಸಿತ್ತು ಎನ್ನಲಾಗಿದೆ. ಆ ಪ್ರಕರಣದ ವಿಚಾರಣೆಗೆ ಸಹಕರಿಸದ ಕಾರಣ, ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ.

ಪ್ರಜಾಪ್ರಭುತ್ವದಲ್ಲಿ ಇಂತಹ ಬೆಳವಣಿಗೆಗಳು ನಾಟಕೀಯ ರೂಪವನ್ನು ತಾಳುತ್ತಿವೆ. ಕಾನೂನಿನ ಪ್ರಕಾರ ಎಲ್ಲರೂ ಸರಿಸಮಾನರು. ಆದರೆ ಕೆಲವರು ಹೆಚ್ಚು ಸಮಾನರು! ಹೌದು, ಶ್ರೀನಿವಾಸ್‌ರ ಜಾಗದಲ್ಲಿ ಶ್ರೀಸಾಮಾನ್ಯನೊಬ್ಬನಿದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ? ಎಂಬುದನ್ನು ನೀವೇ ಯೋಚಿಸಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X