ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರಿಂದಲೇ ಮೈತ್ರಿ ಸರ್ಕಾರ ಪತನ : ಸಿದ್ಧರಾಮಯ್ಯ

By Staff
|
Google Oneindia Kannada News

ಗೌಡರಿಂದಲೇ ಮೈತ್ರಿ ಸರ್ಕಾರ ಪತನ : ಸಿದ್ಧರಾಮಯ್ಯ
ವೃತ್ತಿ ಶಿಕ್ಷಣಕ್ಕೆ ಕೇಂದ್ರೀಯ ಶಾಸನ ರೂಪಿಸಿ ; ಅಹಿಂದ ರೈತರ ಆಗ್ರಹ

ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಇಬ್ಬಂದಿತನದಿಂದ ಕಾಂಗ್ರೆಸ್‌-ಜೆಡಿಎಸ್‌ಮೈತ್ರಿ ಸರ್ಕಾರ ಕುಸಿದು ಬೀಳಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಅವರು ಸೋಮವಾರ ಅಹಿಂದ ರೈತರ ಒಕ್ಕೂಟ ನಡೆಸಿದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಯಾರೂ ಬೀಳಿಸಲಾರರು. ದೇವೇಗೌಡರ ಇಬ್ಬಂದಿತನದಿಂದಾಗಿ ತನ್ನಿಂದತಾನೇ ಪತನಗೊಳ್ಳಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹೇಳಿದರು.

ಸರ್ಕಾರ ಉರುಳಿಸೋದು, ಪಕ್ಷ ಅಭದ್ರಗೊಳಿಸುವ ಭೀತಿ-ಆತಂಕ ರೋಗಗ್ರಸ್ತ ಮನಸ್ಸುಗಳಿಗೆ ಕಾಡುತ್ತಿದೆ ಎಂದು ಅವರು ದೇವೇಗೌಡರನ್ನು ಪರೋಕ್ಷವಾಗಿ ಟೀಕಿಸಿದರು.

ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಪ್ರೀಮ್‌ಕೋರ್ಟ್‌ ತೀರ್ಪನ್ನು ವಿರೋಧಿಸಿ, ಕೇಂದ್ರೀಯ ಶಾಸನ ರಚಿಸುವಂತೆ ಅಹಿಂದ ರೈತರ ಒಕ್ಕೂಟ ಆಗ್ರಹಿಸಿತು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X