ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಶಿವಸೇನೆಗೆ ಪ್ರಮೋದ್‌ ಮುತಾಲಿಕ್‌ ಸಾರಥ್ಯ

By Staff
|
Google Oneindia Kannada News

ರಾಜ್ಯದ ಶಿವಸೇನೆಗೆ ಪ್ರಮೋದ್‌ ಮುತಾಲಿಕ್‌ ಸಾರಥ್ಯ
ಹಿಂದುತ್ವವನ್ನು ಕಡೆಗಣಿಸಿದ ಪಕ್ಷಕ್ಕೆ ಪಾಠ ಕಲಿಸೋಣ -ಮುತಾಲಿಕ್‌

ಬಿಜಾಪುರ : ಭಜರಂಗ ದಳದ ಪ್ರಮುಖ ಪ್ರಮೋದ್‌ ಮುತಾಲಿಕ್‌ ನೇತೃತ್ವದ ಕರ್ನಾಟಕ ರಾಜ್ಯ ಶಿವಸೇನೆ ಘಟಕಕ್ಕೆ ಭಾನುವಾರ ನಗರದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.

ನಗರದ ವನಶ್ರೀ ಮಠದ ಮಂಗಲ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜ್ಯ ಶಿವಸೇನೆ ಘಟಕವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ ಜೋಶಿ ಉದ್ಘಾಟಿಸಿದರು. ರಾಜ್ಯಭಜರಂಗದಳವನ್ನು ತೊರೆದು, ಶಿವಸೇನೆಗೆ ಸೇರಿದ ಪ್ರಮೋದ್‌ ಮುತಾಲಿಕ್‌ ಅವರಿಗೆ ಖಡ್ಗ ನೀಡುವ ಮೂಲಕ ಕರ್ನಾಟಕ ಘಟಕದ ಜವಾಬ್ದಾರಿಯನ್ನು ವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮನೋಹರ ಜೋಶಿ, ದೇಶದಲ್ಲಿ ಹಿಂದುತ್ವವನ್ನು ಬಲಿಷ್ಠಗೊಳಿಸಲು ಮುತಾಲಿಕ್‌ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ. ಈ ಐತಿಹಾಸಿಕ ನಿರ್ಧಾ ರ ಮುಂಬರುವ ದಿನಗಳಲ್ಲಿ ದೇಶಕ್ಕೆ ದಾರಿ ದೀಪವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಮೋದ್‌ ಮುತಾಲಿಕ್‌, ಹಿಂದುತ್ವವನ್ನು ಕಡೆಗಣಿಸಿದ ಪಕ್ಷಕ್ಕೆ ಪಾಠ ಕಲಿಸೋಣ. ಆ ಪಕ್ಷಕ್ಕೆ ನಮ್ಮ ಶಕ್ತಿ, ಶ್ರಮವನ್ನು ವ್ಯಯಿಸುವುದಕ್ಕಿಂತ ನಮ್ಮದೇ ಆದ ಪಕ್ಷ ಇರಲೆಂಬ ಸದುದ್ದೇಶದಿಂದ ವಿಎಚ್‌ಪಿ ಹಾಗೂ ಭಜರಂಗದಳಗಳಿಂದ ಹೊರಬಂದು ಶಿವಸೇನೆ ಸೇರುತ್ತಿದ್ದೇವೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದರು.

ಮುತಾಲಿಕ್‌ರೊಂದಿಗೆ ಸಂಘ ಭಜರಂಜ ದಳ ಮತ್ತು ವಿಶ್ವ ಹಿಂದೂಪರಿಷತ್ತಿನ ನೂರಾರು ಮಂದಿ ಶಿವಸೇನೆ ಪ್ರವೇಶಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X