ರಾಥೋಡ್ಗೆ ‘ಖೇಲ್ ರತ್ನ’,ಸಾನಿಯಾಗೆ ‘ಅರ್ಜುನ’
ರಾಥೋಡ್ಗೆ
‘ಖೇಲ್
ರತ್ನ’,ಸಾನಿಯಾಗೆ
‘ಅರ್ಜುನ’
ಆ.29ರಂದು
ನವದೆಹಲಿಯಲ್ಲಿ
ರಾಷ್ಟ್ರಪತಿಗಳಿಂದ
ಪ್ರಶಸ್ತಿ
ವಿತರಣೆ
ನವದೆಹಲಿ : ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಘನತೆ ತಂದಿದ್ದ ಶೂಟರ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಟೆನ್ನಿಸ್ರಂಗದ ಯುವತಾರೆ ಸಾನಿಯಾ ಮಿರ್ಜಾಗೆ ಪ್ರಸಕ್ತ ಸಾಲಿನ ಅರ್ಜುನ ಪ್ರಶಸ್ತಿ ಸಂದಾಯವಾಗಿದೆ.
ಕೇಂದ್ರ ಸರ್ಕಾರ 2004ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಎಲ್ಲಾ ಪ್ರಶಸ್ತಿಗಳು ತಲಾ ಮೂರು ಲಕ್ಷ ರೂಪಾಯಿಗಳ ನಗದನ್ನು ಒಳಗೊಂಡಿವೆ. ರಾಷ್ಟ್ರಪತಿಭವನದಲ್ಲಿ ಸೋಮವಾರ(ಆ.29) ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ರಾಷ್ಟ್ರಪತಿ ಅಬ್ದುಲ್ ಕಲಾಂ ಪ್ರಶಸ್ತಿಗಳನ್ನು ವಿತರಿಸುವರು.
2004ರ ‘ದ್ರೋಣಾಚಾರ್ಯ ಪ್ರಶಸ್ತಿ’ಗೆ ಕರ್ನಾಟಕದ ಹಿರಿಯ ಆಟಗಾರ, ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಹಾಗೂ ತರಬೇತಿದಾರ ಅರವಿಂದ್ ಸಾವೂರ್ ಹಾಗೂ ಮಹಿಳಾ ಕೋಚ್ ಸುನಿತಾ ಶರ್ಮ ಅವರನ್ನೂ ಆಯ್ಕೆಮಾಡಲಾಗಿದೆ.
2004ರ ಸಾಲಿನ ಕ್ರೀಡಾ ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ :
ರಾಜೀವ್ಗಾಂಧಿ
ಖೇಲ್
ರತ್ನ
:
ರಾಜ್ಯವರ್ಧನ
ಸಿಂಗ್
ರಾಠೋಡ್(ಡಬಲ್
ಟ್ರ್ಯಾಪ್
ಶೂಟಿಂಗ್)
ಅರ್ಜುನ್
ಪ್ರಶಸ್ತಿ
ವಿಜೇತರು
:
ಜೆ.ಜೆ.
ಶೋಭಾ(ಅಥ್ಲೆಟಿಕ್)
ಅನಿಲ್
ಕುಮಾರ್(ಅಥ್ಲೆಟಿಕ್)
ದೀಪ
ಅಹ್ಲವಾಟ್
(ಈಕ್ವೆಸ್ಟ್ರಿಯನ್)
ಇನೊಸೆಂಟ್
ಹೆಲೆನ್
ಮೇರಿ(ಹಾಕಿ)
ಅಂಗೊಮ್
ಅನಿತಾ
ಚಾನು(ಜೂಡೊ)
ಸುಂದರ್
ಸಿಂಗ್(ಕಬ್ಬಡ್ಡಿ)
ಜೆ.ಕೃಷ್ಣನ್(ರೋಯಿಂಗ್)
ದೀಪಾಲಿ
ದೇಶಪಾಂಡೆ(ಶೂಟಿಂಗ್)
ಅಚಂತ
ಶರತ್
ಕಮಲ್(ಟೇಬಲ್
ಟೆನಿಸ್)
ಸಾನಿಯಾ
ಮಿರ್ಜಾ(ಟೆನಿಸ್)
ಅಂಜು
ಕುಮಾರ್(ಕುಸ್ತಿ)
ದೇವೇಂದ್ರ
(ಅಥ್ಲೆಟಿಕ್ಸ್-ಪ್ಯಾರಾಲಿಂಪಿಕ್ಸ್)
ದ್ರೋಣಾಚಾರ್ಯ
ಪ್ರಶಸ್ತಿ
:
ಅರವಿಂದ್
ಸವೂರ್
(ಬಿಲಿಯರ್ಡ್ಸ್)
ಸುನಿತಾ
ಶರ್ಮಾ(ಕ್ರಿಕೆಟ್)
ಧ್ಯಾನ್ಚಂದ್
ಪ್ರಶಸ್ತಿ
:
ಮನೋಜ್
ಕುಮಾರ್
ಕೊಠಾರಿ(ಬಿಲಿಯರ್ಡ್ಸ್
ಹಾಗೂ
ಸ್ನೂಕರ್)
ರಾಜೀಂದರ್
ಸಿಂಗ್
ಜೂನಿಯರ್
(ಹಾಕಿ)
ಮಾರುತಿ
ಧ್ಯಾನು
ಮಾನೆ
ಪಾಟೀಲ್(ಕುಸ್ತಿ)
(ಏಜನ್ಸೀಸ್)
ಮುಖಪುಟ / ವಾರ್ತೆಗಳು