ಅಹಿಂದ ಹಿಮ್ಮೆಟ್ಟಿಸಲು ಜೆಡಿಎಸ್ನಿಂದ ಸಮಾವೇಶ ಪರ್ವ
ಅಹಿಂದ
ಹಿಮ್ಮೆಟ್ಟಿಸಲು
ಜೆಡಿಎಸ್ನಿಂದ
ಸಮಾವೇಶ
ಪರ್ವ
ಆ.28ರಂದು
ತುಮಕೂರಿನಲ್ಲಿ
ಹೊಸ
ಮಹಾಭಾರತ
ಸೃಷ್ಟಿ
-ಕುಮಾರಸ್ವಾಮಿ
ಈ ಕುರಿತು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ತುಮಕೂರಿನಲ್ಲಿ ಅಹಿಂದ ಸಮ್ಮೇಳನ ನಡೆದ ಜಾಗದಲ್ಲೇ, ಆಗಸ್ಟ್ 28ರಂದು ಜಿಲ್ಲಾ ಮಟ್ಟದ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಭೆ ನಡೆಯಲಿದೆ. ಆದರೆ ಇದು ಅಹಿಂದ ಸಮಾವೇಶಕ್ಕೆ ಉತ್ತರವಾಗಿ ನಡೆಯುವ ಸಭೆಯಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಭೆಯಲ್ಲಿ ತುಮಕೂರು ಹೊರತುಪಡಿಸಿ ಬೇರೆ ಜಿಲ್ಲೆಗಳ ಕಾರ್ಯಕರ್ತರನ್ನು ನಾವು ಕರೆತರುವುದಿಲ್ಲ. ಅದಕ್ಕೆ ನಮ್ಮಲ್ಲಿ ಹಣವೂ ಇಲ್ಲ ಎಂದು ಪರೋಕ್ಷವಾಗಿ ಅವರು ಅಹಿಂದ ಸಮಾವೇಶವನ್ನು ಟೀಕಿಸಿದರು. ಈ ಸಮಾವೇಶದಿಂದ ಜಿಲ್ಲೆಯಲ್ಲಿ ಜೆಡಿಎಸ್ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಎಷ್ಟಿದ್ದಾರೆ ಎಂಬುದು ಬಯಲಿಗೆ ಬರಲಿದೆ. 40 ವರ್ಷಗಳ ರಾಜಕೀಯ ಜೀವನದಲ್ಲಿ ಅದೆಷ್ಟೋ ಸಮಾವೇಶಗಳನ್ನು ನಡೆಸಿದ್ದೇನೆ. ಎಂದೂ ಖಾಸಗಿ ಚಾನಲ್ನಲ್ಲಿ ಸಮಾವೇಶದ ನೇರಪ್ರಸಾರ ಮಾಡಿಸಿಕೊಂಡಿಲ್ಲ ಎಂದು ವಿವರಿಸಿದರು.
ಹೊಸ ಮಹಾಭಾರತ : ಆಗಸ್ಟ್ 28ರಂದು ಹೊಸ ಮಹಾಭಾರತ ರಾಜ್ಯದಲ್ಲಿ ಸೃಷ್ಟಿಯಾಗಲಿದೆ ಎನ್ನುವ ಮೂಲಕ ಜೆಡಿಎಸ್ ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಸಿದ್ದರಾಮಯ್ಯ ಬಣದ ಅಹಿಂದ ಸಮಾವೇಶಕ್ಕೆ ತಕ್ಕ ಉತ್ತರ ನೀಡುವ ಸುಳಿವು ನೀಡಿದ್ದಾರೆ.
ದೇವೇಗೌಡರನ್ನು ರಾಜಕೀಯವಾಗಿ ತುಳಿಯುವುದೇ ಅಹಿಂದ ಸಮಾವೇಶದ ಉದ್ದೇಶ. ಇಂತಹ ಸಮಾವೇಶಗಳಲ್ಲಿ ಕಾಂಗ್ರೆಸ್ ಮುಖಂಡರು ಪಾಲ್ಗೊಂಡರೆ ಸಮ್ಮಶ್ರ ಸರ್ಕಾರದ ಭವಿಷ್ಯ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು