ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದಯ ಟಿವಿ ನೌಕರರ ಚಳವಳಿಗೆ ಜಯ ಸಂದಾಯ

By Staff
|
Google Oneindia Kannada News

ಉದಯ ಟಿವಿ ನೌಕರರ ಚಳವಳಿಗೆ ಜಯ ಸಂದಾಯ
ನೌಕರರ ಚಳವಳಿಗೆ ಕನ್ನಡ ಪರ ಸಂಘಟನೆಗಳ ಸಹಕಾರ

ಬೆಂಗಳೂರು : ಕಾರ್ಮಿಕ ಸಚಿವ ಮತ್ತು ಕಾರ್ಮಿಕ ಇಲಾಖೆ ಆಯುಕ್ತರ ಮಧ್ಯಸ್ಥಿಕೆಯಲ್ಲಿ ಉದಯ ಟಿ.ವಿ. ನೌಕರರ ಸಮಸ್ಯೆ ಗುರುವಾರ ಇತ್ಯರ್ಥಗೊಂಡಿದೆ.

ನೌಕರರ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಉದಯ ಟಿ.ವಿ. ಆಡಳಿತ ಮಂಡಳಿ ಸಮ್ಮತಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಉದಯ ಟಿ.ವಿ. ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿರುವ ಉದಯ ಟಿ.ವಿ. ನೌಕರರು, ಸಮಸ್ಯೆ ಬಗೆಹರಿಸಲು ಸರ್ಕಾರ ಮಧ್ಯೆ ಪ್ರವೇಶಿಸಬೇಕೆಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದರು.

ಉದ್ಯೋಗ ಭದ್ರತೆ, ವೈದ್ಯಕೀಯ ಮತ್ತು ಕ್ಯಾಂಟೀನ್‌ ಸೌಲಭ್ಯ, ನಿಗದಿತ ಕಾಲಕ್ಕೆ ಸಂಬಳ ಪಾವತಿ, ಕಾರ್ಮಿಕರ ಕಾನೂನಿನ್ವಯ ಪ್ರಯೋಜನಗಳು, ಕಾಲಕಾಲಕ್ಕೆ ಬಡ್ತಿ ನೀಡಲು ಮತ್ತು ಸಂಬಳ ಹೆಚ್ಚಳ ಮತ್ತಿತರ ಬೇಡಿಕೆಗಳನ್ನು ಬುಧವಾರ ಸಲ್ಲಿಸಲಾಗಿರುವ ಮನವಿ ಪತ್ರದಲ್ಲಿ ನೌಕರರು ಮುಂದಿಟ್ಟಿದ್ದರು.

ಆಡಳಿತ ಮಂಡಳಿಯು ನೌಕರರನ್ನು ಶೋಷಿಸುತ್ತಿದೆ, ಕನ್ನಡ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ, ಉದಯ ಟಿ.ವಿ.ನೌಕರರು ಕನ್ನಡ ಪರ ಸಂಘಟನೆಗಳ ಸಹಕಾರದೊಂದಿಗೆ ನಗರದಲ್ಲಿ ಇತ್ತೀಚೆಗಷ್ಟೇ ಪ್ರತಿಭಟನೆ ನಡೆಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X