ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆ ಪೀಡಿತರ ಹಿತಕ್ಕಾಗಿ ಆ.22ರಿಂದ ಬಿಜೆಪಿ ಧರಣಿ

By Staff
|
Google Oneindia Kannada News

ನೆರೆ ಪೀಡಿತರ ಹಿತಕ್ಕಾಗಿ ಆ.22ರಿಂದ ಬಿಜೆಪಿ ಧರಣಿ
ಮತ್ತೆ ಸಾವಿರ ರೂ. ಪರಿಹಾರ ಧನಕ್ಕೆ ಯಡಿಯೂರಪ್ಪ ಒತ್ತಾಯ

ಬೆಂಗಳೂರು : ರಾಜ್ಯದ ಪ್ರವಾಹ ಪೀಡಿತ ಪರಿಸ್ಥಿತಿ ಬಗೆಗಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ, ಸರ್ಕಾರದ ಧೋರಣೆ ವಿರುದ್ಧ ಬೆಳಗಾವಿಯಲ್ಲಿ ಆ.22ರಿಂದ ಹಗಲು-ರಾತ್ರಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ಮುಖಂಡ ಬಿ.ಎಸ್‌.ಯಡಿಯೂರಪ್ಪ, ನೆರೆ ಪೀಡಿತ ಪ್ರದೇಶಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಅಲ್ಲಿನ ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರ 300ಕೋಟಿ ರೂ. ನೆರವು ಪ್ರಕಟಿಸಿದೆ. ಅದರ ಜೊತೆಗೆ ಮತ್ತೆ 1000ಕೋಟಿ ಹಣವನ್ನು ಪರಿಹಾರ ಕಾರ್ಯಕ್ಕೆ ಬಿಡುಗಡೆ ಮಾಡಬೇಕು ಎಂದ ಯಡಿಯೂರಪ್ಪ, ಸದ್ಯದ ಪರಿಸ್ಥಿತಿ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಬೇಕು. ಪರಿಹಾರ ಕಾರ್ಯದ ಪರಿವೀಕ್ಷಣೆಗೆ ಸರ್ಕಾರೇತರ ಸಮಿತಿಯನ್ನು ಸರ್ಕಾರ ರಚಿಸಬೇಕೆಂದು ಸಲಹೆ ನೀಡಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X