ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.15ರಂದು ಅಚ್ಚಗನ್ನಡದಲ್ಲಿ ವೇದಾಂತ ಗಾನ ರಸಾಯನ

By Staff
|
Google Oneindia Kannada News

ಆ.15ರಂದು ಅಚ್ಚಗನ್ನಡದಲ್ಲಿ ವೇದಾಂತ ಗಾನ ರಸಾಯನ
ಅಧ್ಯಾತ್ಮಕ್ಕೆ ಕನ್ನಡದ ರೂಪ, ಗಾಯನಕ್ಕೆ ಶತಾವಧಾನಿಗಳಿಂದ ವ್ಯಾಖ್ಯಾನ

ಬೆಂಗಳೂರು : ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಜಯನಗರದ ಎಂಟನೇ ಬ್ಲಾಕ್‌ನಲ್ಲಿರುವ ಶಿವರಾತ್ರೀಶ್ವರ ಸಭಾಂಗಣದಲ್ಲಿ ಸೋಮವಾರ(ಆ.15) ಸಂಜೆ ವೇದಾಂತ ಗಾನ ರಸಾಯನ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವೇದಾಂತ ಚಿಂತನ ಸತ್ಸಂಗ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಂಜೆ 4.30ರಿಂದ ಸಂಜೆ 7ಗಂಟೆಯ ತನಕ ನಡೆಯಲಿದೆ. ವೇದಾಂತವನ್ನು ಅಚ್ಚಗನ್ನಡದಲ್ಲಿ ಸುಶ್ರಾವ್ಯವಾಗಿ ಹಾಡುವುದು ಕಾರ್ಯಕ್ರಮದ ವಿಶೇಷ.

ಅಧ್ಯಾತ್ಮ ಗೀತೆಗಳನ್ನು ಗಾಯಕ ಸಂಜೀವಮೂರ್ತಿ ಅವರು ಹಾಡುವರು. ಶತಾವಧಾನಿ ಡಾ.ರಾ.ಗಣೇಶ್‌, ವೇದಾಂತ ಬ್ರಹ್ಮ ಶ್ರೀ ಮತ್ತೂರು ಅಶ್ವತ್ಥನಾರಾಯಣ ಅವಧಾನಿ ಮತ್ತು ವೇ.ಕೆ.ಜಿ.ಸುಬ್ರಾಯ ಶರ್ಮ ಅವರು ಗೀತೆಗಳಿಗೆ ವ್ಯಾಖ್ಯಾನ ನೀಡುವರು.

ಅಧ್ಯಾತ್ಮ ಗೀತೆಗಳನ್ನು ಹೊಳೇ ನರಸೀಪುರದ ಸಚ್ಚಿದಾನಂದೇಂದ್ರ ಸ್ವಾಮೀಜಿ ರಚಿಸಿದ್ದಾರೆ. ವಿನೂತನ ಹಾಡು ಹಬ್ಬಕ್ಕೆ ಎಲ್ಲರನ್ನೂ ಸತ್ಸಂಗ ಆಶ್ರಮ ಸ್ವಾಗತಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X