ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಹಿಂದ’ ಸಮಾಜಘಾತಕರ ಒಕ್ಕೂಟ - ಸಿ.ಚನ್ನಿಗಪ್ಪ

By Staff
|
Google Oneindia Kannada News

‘ಅಹಿಂದ’ ಸಮಾಜಘಾತಕರ ಒಕ್ಕೂಟ - ಸಿ.ಚನ್ನಿಗಪ್ಪ
ಸಿದ್ದರಾಮಯ್ಯ ಅವರನ್ನು ನಿರುದ್ಯೋಗಿ ರಾಜಕಾರಣಿಗಳು ದಾರಿ ತಪ್ಪಿಸಿದರು...

ಬೆಂಗಳೂರು : ಇಬ್ರಾಹಿಂ, ಎಚ್‌.ವಿಶ್ವನಾಥ್‌, ಕೋದಂಡರಾಮಯ್ಯ, ಎಚ್‌.ಎಂ.ರೇವಣ್ಣ ಎಂಬ ಭೂತಗಳು ಸಿದ್ದರಾಮಯ್ಯ ಅವರನ್ನು ಸ್ವಾಹ ಮಾಡಿವೆ. ‘ಅಹಿಂದ’ ಎಂಬುದು ಸಮಾಜಘಾತಕ ಪಂಚಭೂತಗಳ ಅಕ್ರಮ ಸೃಷ್ಟಿ ಎಂದು ರೇಷ್ಮೆ ಮತ್ತು ಅಬಕಾರಿ ಸಚಿವ ಸಿ.ಚನ್ನಿಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ಜಾತಿಯ ಪ್ರಶ್ನೆ ಇಲ್ಲ. ಇದ್ದಿದ್ದರೆ, ಸಿದ್ದರಾಮಯ್ಯ ಅವರನ್ನು ಹಣಕಾಸು ಮತ್ತು ಅಬಕಾರಿ ಸಚಿವರನ್ನಾಗಿ ಮಾಡುತ್ತಿರಲಿಲ್ಲ. ನಿರುದ್ಯೋಗಿ ರಾಜಕಾರಣಿಗಳ ಮಾತು ಕೇಳಿ ಸಿದ್ದರಾಮಯ್ಯ ದಾರಿತಪ್ಪಿದ್ದಾರೆ. ಅವರು ಈಗಲೂ ನಮ್ಮ ನಾಯಕರೇ ಆಗಿದ್ದಾರೆ ಎಂದರು.

ಉಪಮುಖ್ಯಮಂತ್ರಿಯಾಗಿ ದಲಿತರು, ಶೋಷಿತರು ಮತ್ತು ಅಲ್ಪಸಂಖ್ಯಾತರ ಪರವಾಗಿ ಧ್ವನಿ ಎತ್ತಲು ಸಿದ್ದರಾಮಯ್ಯ ಅವರಿಗೆ ಅವಕಾಶವಿತ್ತು. ಅದನ್ನು ಬಿಟ್ಟು, ಗೌಡರ ವಿರುದ್ಧ ಹುಟ್ಟಿಹಾಕಲಾಗಿದ್ದ ಅಹಿಂದಕ್ಕೆ ಕೈಜೋಡಿಸಿದರು. ಅಹಿಂದ ಬೆಂಬಲಿಸುವುದು ಬಸವಣ್ಣನವರನ್ನು ಅವಮಾನಿಸಿದಂತೆ ಎಂದು ಚನ್ನಿಗಪ್ಪ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X