ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂ.ವಿವಿಯ ಸಿಂಡಿಕೇಟ್‌ಗೆ ರಾಜಕಾರಣಿಗಳಿಂದ ಮುಕ್ತಿ

By Staff
|
Google Oneindia Kannada News

ಬೆಂ.ವಿವಿಯ ಸಿಂಡಿಕೇಟ್‌ಗೆ ರಾಜಕಾರಣಿಗಳಿಂದ ಮುಕ್ತಿ
ಹೈಕೋರ್ಟ್‌ ಛೀಮಾರಿಗೆ ಹೆದರಿದ ‘ಧರ್ಮ’ ಸರ್ಕಾರ!

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ನಾಮನಿರ್ದೇಶನ ಮಾಡಿದ್ದ ಸದಸ್ಯರ ಪಟ್ಟಿಯನ್ನು ರಾಜ್ಯಸರ್ಕಾರ ಹಿಂಪಡೆದು, ತೀವ್ರ ಮುಖಭಂಗಕ್ಕೆ ಗುರಿಯಾಗಿದೆ.

ವಿಶ್ವವಿದ್ಯಾಲಯಕ್ಕೆ ಸರ್ಕಾರ ನಾಮಕರಣ ಮಾಡಿದ್ದ ಆರು ಮಂದಿಯಲ್ಲಿ ಒಬ್ಬರು ಮಾತ್ರ ಶಿಕ್ಷಣ ತಜ್ಞರಾಗಿದ್ದರು. ಉಳಿದವರು ರಾಜಕೀಯ ಪ್ರಭಾವದಿಂದಲೇ ಆಯ್ಕೆಗೊಂಡಿದ್ದರು. ಈ ಬಗ್ಗೆ ಸರ್ಕಾರದ ಧೋರಣೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದೂರಿನ ವಿಚಾರಣೆಗೆ ಮುನ್ನವೇ, ಸರ್ಕಾರ ಪಟ್ಟಿಯನ್ನು ಹಿಂಪಡೆದಿದೆ.

ವಿಶ್ವವಿದ್ಯಾಲಯದ ಕಾಯಿದೆಗೆ ವಿರುದ್ಧವಾಗಿ ರಾಜಕೀಯ ಪಕ್ಷಗಳ ಪದಾಧಿಕಾರಿಗಳನ್ನು ಸದಸ್ಯರನ್ನಾಗಿ ನಾಮಕರಣ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಜ್ಞಾನ ಸರಸ್ವತಿಯ ದೇಗುಲದಲ್ಲಿ ರಾಜಕಾರಣಿಗಳಿಗೇನು ಕೆಲಸ ಎಂಬುದು ಪ್ರಜ್ಞಾವಂತರ ಪ್ರಶ್ನೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X