ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಲಯಗಳಲ್ಲಿ ಕನ್ನಡಕ್ಕಿನ್ನು ತೆರೆದ ಬಾಗಿಲು!

By Staff
|
Google Oneindia Kannada News

ನ್ಯಾಯಾಲಯಗಳಲ್ಲಿ ಕನ್ನಡಕ್ಕಿನ್ನು ತೆರೆದ ಬಾಗಿಲು!
ಎಲ್ಲ ನ್ಯಾಯಾಲಯಗಳಿಗೂ ಕನ್ನಡದಲ್ಲಿ ನಾಗರಿಕ ಪ್ರಕ್ರಿಯಾ ಸಂಹಿತೆ, ಅಪರಾಧಿ ಪ್ರಕ್ರಿಯಾ ಸಂಹಿತೆ ಪೂರೈಕೆ

ಮಂಗಳೂರು : ಸೆಪ್ಟೆಂಬರ್‌ ತಿಂಗಳೊಳಗಾಗಿ ನ್ಯಾಯಾಲಯಗಳಿಗೆ ನಾಗರಿಕ ಪ್ರಕ್ರಿಯಾ ಸಂಹಿತೆ ಮತ್ತು ಅಪರಾಧಿ ಪ್ರಕ್ರಿಯಾ ಸಂಹಿತೆ(ಸಿಪಿಸಿ, ಸಿಆರ್‌ಪಿಸಿ) ಮಾದರಿಯನ್ನು ಕನ್ನಡದಲ್ಲಿ ಪೂರೈಕೆ ಮಾಡಲಾಗುವುದು ಎಂದು ನ್ಯಾಯಾಲಯ ಪ್ರಾಧಿಕಾರದ ಕಾರ್ಯದರ್ಶಿ ಎ.ವಿ.ಪ್ರಸನ್ನ ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಜೊತೆ ಬುಧವಾರ ಅವರು ಮಾತನಾಡುತ್ತಿದ್ದರು.

ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ ಸಾಧ್ಯವಿಲ್ಲ ಎನ್ನುವುದು ಅರ್ಥಹೀನ. ಸಿಪಿಸಿ ಮತ್ತು ಸಿಆರ್‌ಪಿಸಿ ನಮೂನೆಗಳನ್ನು ನ್ಯಾಯಾಲಯ ಪ್ರಾಧಿಕಾರ ಕನ್ನಡದಲ್ಲಿ ಮುದ್ರಿಸಿ ಪೂರೈಕೆ ಮಾಡುತ್ತಿದೆ ಎಂದರು.

ಇನ್ನೊಂದು ತಿಂಗಳಲ್ಲಿ ಎಲ್ಲ ನ್ಯಾಯಾಲಯಗಳಿಗೂ ಪೂರೈಕೆ ಮಾಡಲಾಗುವುದು. ಹೈಕೋರ್ಟ್‌ನ ಅಧೀನ ನ್ಯಾಯಾಲಯಗಳಲ್ಲಿ ತೀರ್ಪು ಕನ್ನಡದಲ್ಲೇ ಇರಬೇಕೆಂಬ ಆದೇಶ ಜಾರಿಯಲ್ಲಿದೆ. ಅದಕ್ಕೆ ಹೊಸದಾಗಿ ಆದೇಶ ಹೊರಡಿಸುವ ಅಗತ್ಯವಿಲ್ಲ. ಆದರೆ ಹೈಕೋರ್ಟ್‌ನಲ್ಲಿ ಕನ್ನಡ ಕಡ್ಡಾಯ ಮಾಡುವುದು ಬೇರೆ ಬೇರೆ ಕಾರಣಗಳಿಂದ ಸಾಧ್ಯವಾಗದು ಎಂದು ಪ್ರಸನ್ನ ಸ್ಪಷ್ಟಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X