ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿ.ಜಿ.ಆರ್‌.ಸಿಂಧ್ಯಗೆ ಹಣಕಾಸು, ಚನ್ನಿಗಪ್ಪಗೆ ಅಬಕಾರಿ

By Staff
|
Google Oneindia Kannada News

ಪಿ.ಜಿ.ಆರ್‌.ಸಿಂಧ್ಯಗೆ ಹಣಕಾಸು, ಚನ್ನಿಗಪ್ಪಗೆ ಅಬಕಾರಿ
ಆಗಸ್ಟ್‌ 15ರ ನಂತರ ಸಂಪುಟ ವಿಸ್ತರಣೆ -ಧರ್ಮಸಿಂಗ್‌

ಬೆಂಗಳೂರು : ಸಿದ್ದರಾಮಯ್ಯ ಪದಚ್ಯುತಿಯಿಂದ ತೆರವಾಗಿರುವ ಸಚಿವ ಖಾತೆಗಳು ಸಿಂಧ್ಯ ಮತ್ತು ಚನ್ನಿಗಪ್ಪ ಅವರ ಪಾಲಾಗಿವೆ.

ರೇಷ್ಮೆ ಸಚಿವ ಸಿ.ಚನ್ನಿಗಪ್ಪ ಅವರಿಗೆ ಅಬಕಾರಿ ಮತ್ತು ಕೈಗಾರಿಕೆ ಸಚಿವ ಪಿ.ಜಿ.ಆರ್‌.ಸಿಂಧ್ಯ ಅವರಿಗೆ ಹಣಕಾಸು ಖಾತೆಯನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿ ಸೋಮವಾರ ರಾತ್ರಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.

ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರ ಶಿಫಾರಸಿನನ್ವಯ ರಾಜ್ಯಪಾಲರು ಖಾತೆಗಳ ಮರು ಹಂಚಿಕೆಗೆ ಗ್ರೀನ್‌ ಸಿಗ್ನಲ್‌ ತೋರಿಸಿದ್ದಾರೆ. ಲಾಟರಿ ಸಚಿವ ಬಸವರಾಜ ಹೊರಟ್ಟಿ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ, ಸಕ್ಕರೆ ಖಾತೆ ಸಚಿವ ಅಮರೇಗೌಡ ಅವರಿಗೆ ಜವಳ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ ಕಂದಾಯ ಖಾತೆಯಲ್ಲಿಯೇ ಮುಂದುವರೆಯುವರು.

ಸಂಪುಟದ ಕಸರತ್ತು : ಆಗಸ್ಟ್‌ ಹದಿನೈದರ ನಂತರ ಸಚಿವ ಸಂಪುಟ ವಿಸ್ತರಣೆಯ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾಳಯದಲ್ಲಿ ಸಚಿವ ಪದವಿ ಆಕಾಂಕ್ಷಿಗಳು ತಮ್ಮ ಕಸರತ್ತುಗಳನ್ನು ಆರಂಭಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X