ಮೃಗಾಲಯದ ಪ್ರಾಣಿಗಳ ಕ್ಷೇಮಕ್ಕಾಗಿ ಡೈಗ್ನಾಸ್ಟಿಕ್ ಸೆಂಟರ್
ಮೃಗಾಲಯದ
ಪ್ರಾಣಿಗಳ
ಕ್ಷೇಮಕ್ಕಾಗಿ
ಡೈಗ್ನಾಸ್ಟಿಕ್
ಸೆಂಟರ್
ತಜ್ಞ
ಪಶು
ವೈದ್ಯರು,
ಸಿಬ್ಬಂದಿಯಿಂದ
24
ತಾಸೂ
ಕಾಳಜಿ...
ಈ ಕುರಿತು ಪಶುವೈದ್ಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಆರ್.ಎನ್.ಶ್ರೀನಿವಾಸಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇತ್ತೀಚೆಗೆ ಮೃಗಾಲಯದಲ್ಲಿ ಆನೆ, ನವಿಲು ಸೇರಿದಂತೆ ಅಪರೂಪದ ಪ್ರಾಣಿ-ಪಕ್ಷಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪಿವೆ. ಇದರಿಂದ ಸಿಬ್ಬಂದಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ರೋಗ ಪತ್ತೆ ಹಚ್ಚುವ ಪ್ರಯೋಗಶಾಲೆಯನ್ನು ತೆರೆಯಲಾಗಿದ್ದು, ದಿನದ 24 ಗಂಟೆಗಳಲ್ಲೂ ಪ್ರಾಣಿ-ಪಕ್ಷಿಗಳ ಆರೋಗ್ಯದತ್ತ ನಿಗಾವಹಿಸಲಾಗುವುದು ಎಂದರು.
ಪಶು ವಿಶ್ವವಿದ್ಯಾಲಯವು ಭಾರತದ ಪ್ರಪ್ರಥಮ ವನ್ಯಮೃಗಗಳ ರೋಗ ಪತ್ತೆ ಕೇಂದ್ರವನ್ನು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಥಾಪಿಸಿದೆ. ಶಿವಮೊಗ್ಗ ಸೇರಿದಂತೆ ಇನ್ನೂ ಐದು ಕಡೆ ಇಂತಹ ಪ್ರಯೋಗಾಲಯ ತೆರೆಯುವ ಪ್ರಸ್ತಾವನೆ ಇದೆ. ಇಲ್ಲಿನ ಮೀಸಲು ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳ ಆರೋಗ್ಯವನ್ನು, ಈ ಪ್ರಯೋಗಾಲಯ ನೋಡಿಕೊಳ್ಳಲಿದೆ ಎಂದು ಶ್ರೀನಿವಾಸಗೌಡ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು