ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿಸಿದ ಆರೆಸ್ಸೆಸ್‌ ಸಂಧಾನ, ಬಿಜೆಪಿಗೆ ತಾತ್ಕಾಲಿಕ ತೇಪೆ

By Staff
|
Google Oneindia Kannada News

ಫಲಿಸಿದ ಆರೆಸ್ಸೆಸ್‌ ಸಂಧಾನ, ಬಿಜೆಪಿಗೆ ತಾತ್ಕಾಲಿಕ ತೇಪೆ
ರಾಜ್ಯ ರಾಜಕಾರಣದಲ್ಲಿ ಅನಂತ್‌ಕುಮಾರ್‌ ಹಸ್ತಕ್ಷೇಪಕ್ಕೆ ಯಡಿಯೂರಪ್ಪ ಆಕ್ರೋಶ, ಹೈಕಮಾಂಡ್‌ನಿಂದ ಎಲ್ಲಕ್ಕೂ ಅಸ್ತು

ಬೆಂಗಳೂರು : ಬಿಜೆಪಿ ಬಿಕ್ಕಟ್ಟು ಭಾನುವಾರ ನಾಟಕೀಯ ತಿರುವು ಪಡೆದಿದ್ದು, ಬಿ.ಎಸ್‌.ಯಡಿಯೂರಪ್ಪ ಅವರು ಕಾಂಗ್ರೆಸ್‌ ಅಥವಾ ಜೆಡಿಎಸ್‌ ಪ್ರವೇಶಿಸುವ ವಿಚಾರಕ್ಕೆ ಈಗ ತೆರೆ ಬಿದ್ದಿದೆ.

ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ನಿವಾರಣೆಗೆ ಸಂಬಂಧಿಸಿದಂತೆ, ಸಂಘ ಪರಿವಾರ ಮತ್ತು ಪೇಜಾವರ ಶ್ರೀಗಳು ನಡೆಸಿದ ಮಧ್ಯಸ್ಥಿಕೆ ಫಲ ನೀಡಿದೆ. ಅಲ್ಲದೇ ಕೇಂದ್ರದ ಬಿಜೆಪಿ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಆಡ್ವಾಣಿ, ಉಮಾಭಾರತಿ, ಮುರಳಿ ಮನೋಹರ್‌ ಜೋಷಿ ಅವರ ಮಾತಿಗೆ ಯಡಿಯೂರಪ್ಪ ಸಮ್ಮತಿಸಿದ್ದಾರೆ.

ವೆಂಕಯ್ಯ ನಾಯ್ಡು ಅವರ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಯಡಿಯೂರಪ್ಪ ಅವರ ಎಲ್ಲ ಬೇಡಿಕೆಗಳನ್ನು ಹಂತಹಂತವಾಗಿ ಪೂರೈಸುವುದಾಗಿ ಬಿಜೆಪಿ ಹೈಕಮಾಂಡ್‌ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಅನಂತ್‌ಕುಮಾರ್‌ ಮತ್ತು ಯಡಿಯೂರಪ್ಪ ಬಣಗಳ ನಡುವಿನ ಶೀತಲ ಸಮರಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಸದ್ಯದ ಬೆಳವಣಿಗೆಯಲ್ಲಿ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದೆ.

ಬಿಜೆಪಿ ತೊರೆಯುವುದಿಲ್ಲ. ಮುಖ್ಯಮಂತ್ರಿಯಾಗುವ ಬಯಕೆಯೂ ನನ್ನಲ್ಲಿಲ್ಲ ಎಂದು ಯಡಿಯೂರಪ್ಪ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X