ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸರಲ್ಲಿ ಕಮಲ, ಕವಲು ಹಾದಿಯಲ್ಲಿ ಯಡಿಯೂರಪ್ಪ

By Staff
|
Google Oneindia Kannada News

ಕೆಸರಲ್ಲಿ ಕಮಲ, ಕವಲು ಹಾದಿಯಲ್ಲಿ ಯಡಿಯೂರಪ್ಪ
ದೇವೇಗೌಡರು ದೊಡ್ಡ ಮನಸ್ಸು ಮಾಡಿ ಬಿಜೆಪಿ ಜೊತೆ ಕೈಜೋಡಿಸಲಿ -ಯಡಿಯೂರಪ್ಪ

ಬೆಂಗಳೂರು : ಬಿಜೆಪಿಯಲ್ಲಿನ ಭಿನ್ನಮತ ಭಾನುವಾರ ಹೊಸ ರೂಪ ಪಡೆಯುವ ಸಾಧ್ಯತೆಗಳಿವೆ. ಅಧಿಕಾರವನ್ನು ಹಿಡಿಯಲೇ ಬೇಕೆಂಬ ಹಠದಿಂದ ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಬಾಗಿಲನ್ನು ತಟ್ಟುತ್ತಿದ್ದಾರೆ.

ದೇವೇಗೌಡ ಮತ್ತು ಕುಮಾರಸ್ವಾಮಿ ಜೊತೆ ಯಡಿಯೂರಪ್ಪ ಗುಪ್ತ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸುದ್ದಿಗಾರರೊಂದಿಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಜನರ ಹಿತದಿಂದ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ತಪ್ಪಿಸಲು ದೇವೇಗೌಡರು ದೊಡ್ಡ ಮನಸ್ಸು ಮಾಡ ಬೇಕು. ಬಿಜೆಪಿ ಜೊತೆ ಕೈಜೋಡಿಸಿ, ಪರ್ಯಾಯ ಸರ್ಕಾರ ರಚಿಸಬೇಕು ಎಂದರು.

ಅಗತ್ಯ ಶಾಸಕರ ಬೆಂಬಲ ಗಳಿಸಲು ವಿಫಲರಾಗಿರುವ ಯಡಿಯೂರಪ್ಪ ಮತ್ತೊಂದೆಡೆ ಕಾಂಗ್ರೆಸ್‌ ಸೇರಲು ಪ್ರಯತ್ನ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅನಂತ್‌ಕುಮಾರ್‌ ಬಣ ಹೈಕಮಾಂಡ್‌ಗೆ ದೂರು ನೀಡಿದೆ. ಬಿಕ್ಕಟ್ಟು ನಿವಾರಿಸಲು ರಾಜ್ಯಕ್ಕೆ ಆಗಮಿಸಿರುವ ವೇದಪ್ರಕಾಶ್‌ ಗೋಯಲ್‌ ಮತ್ತು ವೆಂಕಯ್ಯ ನಾಯ್ಡು ಜೊತೆ ಯಡಿಯೂರಪ್ಪ ಭಾನುವಾರ ಚರ್ಚೆ ನಡೆಸುವ ಸಂಭವವಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X