For Daily Alerts
ಸಿದ್ಧು, ಬೆಂಬಲಿಗ ಸಚಿವರ ವಜಾ : ಅಧಿಕೃತ ಪ್ರಕಟಣೆ
ಸಿದ್ಧು,
ಬೆಂಬಲಿಗ
ಸಚಿವರ
ವಜಾ
:
ಅಧಿಕೃತ
ಪ್ರಕಟಣೆ
ಸಿದ್ಧರಾಮಯ್ಯ
ರಾಜೀನಾಮೆ
ನೀಡಲಿಲ್ಲ,
ಆದರೆ
ವಜಾ
ತಪ್ಪಲಿಲ್ಲ...
ಮುಖ್ಯಮಂತ್ರಿ ಧರ್ಮಸಿಂಗ್ ಶಿಫಾರಸಿನ ಅನ್ವಯ ರಾಜ್ಯಪಾಲ ಟಿ.ಎನ್.ಚತುರ್ವೇದಿ ಶುಕ್ರವಾರ ಈ ಕ್ರಮ ಕೈಗೊಂಡಿದ್ದಾರೆ. ಶಿಫಾರಸು ಪತ್ರ ಸಲ್ಲಿಕೆಯಾದ ಕೆಲವೇ ಕ್ಷಣಗಳಲ್ಲಿ ರಾಜ್ಯಪಾಲರ ಹೆಸರಲ್ಲಿ ಅವರ ಕಾರ್ಯದರ್ಶಿ ಗೌರಿ ಎಸ್. ತ್ರಿವೇದಿ, ಮೂವರನ್ನು ವಜಾ ಮಾಡಿದ ಅಧಿಸೂಚನೆ ಹೊರಡಿಸಿದರು.
ಈ ಮಧ್ಯೆ ಜಾತ್ಯತೀತ ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಕಂದಾಯ ಸಚಿವ ಎಂ.ಪಿ.ಪ್ರಕಾಶ್ ಅವರಿಗೆ ಮಾನ್ಯತೆ ನೀಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಕೃಷ್ಣ ಪ್ರಕಟಿಸಿದ್ದಾರೆ. ಇದರೊಂದಿಗೆ ಜಾತ್ಯತೀತ ಜನತಾದಳದ ಅಂತರ್ಯುದ್ಧ ನಿರ್ದಿಷ್ಟ ಹಂತ ತಲುಪಿದಂತಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Saturday, August 6, 2005, 23:53 [IST]