ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸಕೋಟೆ : ಜೆಡಿಎಸ್‌ ಬಿಕ್ಕಟ್ಟಿಗೆ ಐರಾವತ ಆಹುತಿ

By Staff
|
Google Oneindia Kannada News

ಹೊಸಕೋಟೆ : ಜೆಡಿಎಸ್‌ ಬಿಕ್ಕಟ್ಟಿಗೆ ಐರಾವತ ಆಹುತಿ
ಸಿದ್ಧರಾಮಯ್ಯ ಬೆಂಬಲಿಗರಿಂದ ಹಿಂಸಾಚಾರ, ಗಾಳಿಯಲ್ಲಿ ಗುಂಡು ಲಾಠಿ ಪ್ರಹಾರ

ಹೊಸಕೋಟೆ : ಸಿದ್ಧರಾಮಯ್ಯ ಪದಚ್ಯುತಿ ಖಂಡಿಸಿ ಶುಕ್ರವಾರ ಅಹಿಂದ ಸಂಘಟನೆ ಕಾರ್ಯಕರ್ತರು ನಡೆಸಿದ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಈ ಸಂದರ್ಭದಲ್ಲಿ ಮೂರು ಸರ್ಕಾರಿ ಬಸ್‌ಗಳು ಬೆಂಕಿಗಾಹುತಿಯಾಗಿದ್ದು, 15ಬಸ್‌ಗಳು ಜಖಂಗೊಂಡಿವೆ. ಉಪಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ಎಚ್‌.ಸಿ.ಮಹಾದೇವಪ್ಪ ಮತ್ತು ಸತೀಶ್‌ ಜಾರಕಿಹೊಳಿ ವಜಾ ಖಂಡಿಸಿ ಪ್ರತಿಭಟನೆಗಿಳಿದ ಕಾರ್ಯಕರ್ತರು, ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದರು. ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ರಾಜಹಂಸ ಬಸ್‌ ಸಂಪೂರ್ಣ ಭಸ್ಮಗೊಂಡಿದೆ.

ವೇಗದೂತ ಬಸ್‌ನ ಹಿಂಭಾಗ ಹಾಗೂ ಬಿಎಂಟಿಸಿ ಬಸ್‌ನ ಮುಂಭಾಗದ ಆಸನಗಳು ಸುಟ್ಟುಹೋಗಿವೆ. ಕಲ್ಲುತೂರಾಟದಲ್ಲಿ 10 ಬಿಎಂಟಿಸಿ, 4ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು 1ಐರಾವತ ಬಸ್‌ನ ಗಾಜುಗಳು ಪುಡಿಪುಡಿಯಾಗಿವೆ. ಕುರುಬರಪೇಟೆ ವೃತ್ತ ಹಾಗೂ ಕೆಇಬಿ ವೃತ್ತದಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಗಾಳಿಯಲ್ಲಿ ಗುಂಡು ಹಾರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X