ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್‌ ಪತ್ರ : ಕೊನೆಗೂ ಖಚಿತಪಡಿಸಿದ ಧರಂ

By Staff
|
Google Oneindia Kannada News

ಜೆಡಿಎಸ್‌ ಪತ್ರ : ಕೊನೆಗೂ ಖಚಿತಪಡಿಸಿದ ಧರಂ
ಮುಂದಿನ ಕ್ರಮದ ಬಗ್ಗೆ ಬಾಯ್ಬಿಡದ ಧರಂ, ಮುಂದುವರಿದ ಕುತೂಹಲ

ಬೆಂಗಳೂರು : ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಕೋರಿ ಜೆಡಿಎಸ್‌ ಸಲ್ಲಿಸಿದ್ದ ಪತ್ರ, ನನ್ನ ಕೈಸೇರಿದೆ ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಶುಕ್ರವಾರ ಅವರು ಮಾತನಾಡಿದರು. ಸಿದ್ಧರಾಮಯ್ಯ ಮತ್ತವರ ಬೆಂಬಲಿಗ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡುವ ಕುರಿತು ರಾಜ್ಯಪಾಲರಿಗೆ ಯಾವಾಗ ಶಿಫಾರಸು ಮಾಡುವಿರಿ ಎಂಬ ಸುದ್ದಿಗಾರರ ಪ್ರಶ್ನೆಗೆ, ಪತ್ರವಂತೂ ಬಂದಿದೆ ನೋಡಬೇಕು ಎಂದು ಧರ್ಮಸಿಂಗ್‌ ಉತ್ತರ ನೀಡಿದರು.

ಸಚಿವ ಜಾರಕಿಹೊಳಿ ಈಗಾಗಲೇ ರಾಜೀನಾಮೆ ನೀಡಿದ್ದಾರೆಯೇ ಎಂಬ ಪ್ರಶ್ನೆಗೂ ಜಾರಿಕೆಯ ಉತ್ತರ ನೀಡಿದರು.

ಸಿದ್ಧರಾಮಯ್ಯ ಅವರನ್ನು ಜಾತ್ಯತೀತ ಜನತಾದಳ ಶಾಸಕಾಂಗ ಪಕ್ಷದ ನಾಯಕತ್ವದಿಂದ ತೆಗೆದುಹಾಕಿ, ಅವರ ಬದಲಿಗೆ ಎಂ.ಪಿ.ಪ್ರಕಾಶ್‌ ಅವರನ್ನು ಗುರುವಾರವಷ್ಟೇ ನೇಮಕ ಮಾಡಲಾಗಿದೆ. ಆದರೂ ಸಿದ್ಧರಾಮಯ್ಯ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸುತ್ತಿದ್ದು, ದೇವೇಗೌಡ ಬೆಂಬಲಿಗರು ನಡೆಸಿದ ಸಭೆಯು ಕಾನೂನು ಬಾಹಿರ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳು ಇಂತಹ ಕ್ರಮ ಕೈಗೊಳ್ಳಲಿಕ್ಕಿಲ್ಲ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌ ಕೈಗೊಳ್ಳುವ ತೀರ್ಮಾನ ಕುತೂಹಲ ಕೆರಳಿಸಿದೆ.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X