ಅನಂತ್ ಏರಿಗೆ, ಯಡಿಯೂರ್ ನೀರಿಗೆ : ಹೀಗಾದ್ರೆ ಬಿಜೆಪಿ?
ಅನಂತ್
ಏರಿಗೆ,
ಯಡಿಯೂರ್
ನೀರಿಗೆ
:
ಹೀಗಾದ್ರೆ
ಬಿಜೆಪಿ?
ದೇವೇಗೌಡ
ಬೇಡ
ಅಂದರೂ,
ಜೆಡಿಎಸ್
ಜೊತೆ
ಕೈಜೋಡಿಸಲು
ಬಿಜೆಪಿ
ಕಸರತ್ತು
ಕಾಂಗ್ರೆಸ್ ಮೈತ್ರಿ ಮುರಿದು ಕೊಂಡು ಜೆಡಿಎಸ್ ಹೊರಬಂದರೆ ಅದರೊಂದಿಗೆ ಕೈಜೋಡಿಸಿ, ಸರ್ಕಾರ ರಚಿಸಬೇಕೆನ್ನುವುದು ಬಿ.ಎಸ್.ಯಡಿಯೂರಪ್ಪ ಅವರ ಬಣದ ಉದ್ದೇಶ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಮನೆಯಲ್ಲಿ ಬಿಜೆಪಿ ಶಾಸಕರ ಗುಪ್ತ ಸಭೆಗಳು ನಡೆದಿವೆ.
ಜೆಡಿಎಸ್ ಜೊತೆ ಕೈಜೋಡಿಸುವ ಯಡಿಯೂರಪ್ಪ ಅವರ ಹೇಳಿಕೆ, ಅನಂತ್ಕುಮಾರ್ ಬಣವನ್ನು ಕೆರಳಿಸಿದೆ. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅನಂತ್ಕುಮಾರ್ ಬಣ, ಗುರುವಾರ ಸಭೆ ನಡೆಸಿ ಮುಂದಿನ ಸಾಧಕಬಾಧಕಗಳನ್ನು ಚರ್ಚಿಸಿದೆ. ಅಲ್ಲದೇ ಪಕ್ಷ ಒಡೆಯಲು ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ಹೈಕಮಾಂಡ್ಗೆ ದೂರು ಸಲ್ಲಿಸಿದೆ.
ನಮ್ಮ ಪರವಾಗಿ 56 ಬಿಜೆಪಿ ಶಾಸಕರಿದ್ದು, ಪೂರಕ ವಾತಾವರಣ ಲಭ್ಯವಾದರೇ, ಜೆಡಿಎಸ್ ಜೊತೆ ಸರ್ಕಾರ ರಚಿಸುವುದಾಗಿ ಯಡಿಯೂರಪ್ಪ ಅವರ ಬೆಂಬಲಿಗರು ಹೇಳುತ್ತಿದ್ದಾರೆ.
ಪದಚ್ಯುತಿ : ಸಿದ್ದರಾಮಯ್ಯ ಗುರುವಾರ ಕರೆದಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಸಂಭವವಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು