ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ.ಪಿ.ಪ್ರಕಾಶ್‌ ಜೆಡಿಎಲ್‌ಪಿ ನಾಯಕ : ತಿಪ್ಪಣ್ಣ ಘೋಷಣೆ

By Staff
|
Google Oneindia Kannada News

ಎಂ.ಪಿ.ಪ್ರಕಾಶ್‌ ಜೆಡಿಎಲ್‌ಪಿ ನಾಯಕ : ತಿಪ್ಪಣ್ಣ ಘೋಷಣೆ
ಸಿದ್ಧರಾಮಯ್ಯಗೆ ಉಪಮುಖ್ಯಮಂತ್ರಿ ಸ್ಥಾನದಿಂದಲೂ ಕೆಳಗಿಳಿಯಲು ಸೂಚನೆ

ಬೆಂಗಳೂರು : ಜೆಡಿಎಸ್‌ನ ಹಿರಿಯ ನಾಯಕ ಹಾಗೂ ಕಂದಾಯ ಸಚಿವ ಎಂ.ಪಿ.ಪ್ರಕಾಶ್‌ ಅವರನ್ನು ಜಾತ್ಯತೀತ ಜನತಾದಳ ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಲಾಗಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌.ತಿಪ್ಪಣ್ಣ ಆಯ್ಕೆಯನ್ನು ಗುರುವಾರ ಘೋಷಿಸಿದರು. ಆಗಸ್ಟ್‌ 1ರಂದು ನಡೆದ ಭೋಜನಕೂಟದಲ್ಲಿ ಸಿದ್ಧರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಲು ತೀರ್ಮಾನಿಸಲಾಯಿತು. ಅವರ ಸ್ಥಾನಕ್ಕೆ ಎಂ.ಪಿ.ಪ್ರಕಾಶ್‌ ಅವರನ್ನು ತರುವ ಕುರಿತೂ ಸಭೆಯು ನಿರ್ಣಯ ಕೈಗೊಂಡಿತು ಎಂದು ತಿಪ್ಪಣ್ಣ ಸ್ಪಷ್ಟಪಡಿಸಿದರು.

ಬುಧವಾರವಷ್ಟೇ ಜಾತ್ಯತೀತ ಜನತಾದಳ ನಾಯಕರು ಸ್ಪೀಕರ್‌ ಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸಿ, ಸಿದ್ಧರಾಮಯ್ಯ ಅವರು ಶಾಸಕರ ವಿಶ್ವಾಸ ಕಳೆದುಕೊಂಡಿರುವುದರಿಂದ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಕೈಬಿಡಬೇಕು. ಅವರ ಸ್ಥಾನಕ್ಕೆ ಪ್ರಕಾಶ್‌ ಅವರನ್ನು ತರಬೇಕು ಎಂದು ಕೋರಿದ್ದರು.

ಪ್ರಕಾಶ್‌ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ಅವರ ನಾಯಕತ್ವದ ಅನುಭವದಲ್ಲಿ ಪಕ್ಷವು ಹೆಚ್ಚಿನ ಶಕ್ತಿ ಪಡೆಯಲಿದೆ. ಇತ್ತೀಚಿನ ಕೆಲವು ವಿದ್ಯಮಾನಗಳಿಂದ ಪಕ್ಷದಲ್ಲುಂಟಾದ ಅಲ್ಪ ಹಿನ್ನಡೆಯನ್ನು ಪ್ರಕಾಶ್‌ ನಾಯಕತ್ವ ಸಮರ್ಥವಾಗಿ ಸರಿಪಡಿಸಲಿದೆ. ಸಿದ್ಧರಾಮಯ್ಯ ತಕ್ಷಣವೇ ಜೆಡಿಎಲ್‌ಪಿ ನಾಯಕತ್ವದಿಂದ ಮತ್ತು ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ತಿಪ್ಪಣ್ಣ ಕರೆನೀಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X