ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿ ವದಂತಿಯ ಕಾಲ್ತುಳಿತಕ್ಕೆ ಇನ್ನೂ ಇಬ್ಬರು ಬಲಿ

By Staff
|
Google Oneindia Kannada News

ಸುನಾಮಿ ವದಂತಿಯ ಕಾಲ್ತುಳಿತಕ್ಕೆ ಇನ್ನೂ ಇಬ್ಬರು ಬಲಿ
ಮೃತರ ಸಂಖ್ಯೆ18ಕ್ಕೆ ಹೆಚ್ಚಳ, ಮುಂಬಯಿನಿಂದ ದೂರದ ರೈಲು ಸಂಚಾರ ರದ್ದು

ಮುಂಬಯಿ : ಮಹಾನಗರಕ್ಕೆ ಸುನಾಮಿ ಅಪ್ಪಳಿಸಲಿದೆ ಎಂಬ ವದಂತಿ ಹರಡಿ, ಹದಿನೆಂಟು ಮಂದಿ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ 17ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ನೆಹರು ನಗರ ಮತ್ತು ಸುಭಾಷ್‌ ನಗರಗಳಲ್ಲಿ ವದಂತಿ ಹಬ್ಬಿಸುತ್ತಿದ್ದವರನ್ನು ಬಂಧಿಸಿರುವ ಪೊಲೀಸರು ಇಂತಹ ವದಂತಿ ಹಬ್ಬಿಸಿದರೆ, ಗಂಭೀರ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ನಗರದ ಸಾಂತಾಕ್ರೂಸ್‌ ಮತ್ತು ಕುರ್ಲಾ ಪ್ರದೇಶಗಳಲ್ಲಿ ಸುನಾಮಿ ಅಪ್ಪಳಿಸಲಿದೆ ಮತ್ತು ಪೊವಾಯಿ ಅಣೆಕಟ್ಟೆ ಒಡೆದಿದೆ ಎಂಬ ಜೋಡಿ ವದಂತಿಗಳಿಗೆ ಹೆದರಿ, ಗುರುವಾರ ರಾತ್ರಿ ಜನರು ದಿಕ್ಕೆಟ್ಟು ಓಡಲಾರಂಭಿಸಿದಾಗ ಕಾಲ್ತುಳಿತ ಉಂಟಾಗಿ 18 ಮಂದಿ ಬಲಿಯಾಗಿದ್ದರು. 10ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಮುಂಬಯಿನಿಂದ ಹೊರಡುವ ದೂರದ ಅಂತರದ ಎಲ್ಲಾ ರೈಲುಗಳ ಸಂಚಾರವನ್ನು ಶುಕ್ರವಾರ ರದ್ದುಪಡಿಸಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

(ಏಜನ್ಸಿ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X