ಉಡುಪಿ :ಗುರಿ ತಪ್ಪಿದ ನಕ್ಸಲ್ ಬಾಂಬ್, ತಪ್ಪಿದ ದುರಂತ
ಉಡುಪಿ
:ಗುರಿ
ತಪ್ಪಿದ
ನಕ್ಸಲ್
ಬಾಂಬ್,
ತಪ್ಪಿದ
ದುರಂತ
ಸರ್ಕಾರದ
ನಕ್ಸಲ್
ನಿಗ್ರಹ
ದಳದ
ಮೇಲೆ
ನಕ್ಸಲರ
ಆಕ್ರೋಶ
ಪ್ರಕಟ
ನಕ್ಸಲ್ ನಿಗ್ರಹ ದಳ ಶೋಧ ಕಾರ್ಯಾಚರಣೆಗೆ ತೆರಳಿದ್ದಾಗ ನಕ್ಸಲರು ನೆಲ ಬಾಂಬ್ ದಾಳಿ ನಡೆಸಿದ್ದಾರೆ. ಬಾಂಬ್ ಗುರಿ ತಪ್ಪಿ ಪೊಲೀಸ್ ಜೀಪಿನ ಪಕ್ಕದಲ್ಲಿ ಸಿಡಿದ ಕಾರಣ ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ರಸ್ತೆ ಮೇಲ್ಭಾಗದಲ್ಲೇ ಅವಿತಿದ್ದ ನಕ್ಸಲರು ಪೊಲೀಸರ ಹತ್ಯಾಕಾಂಡಕ್ಕೆ ಹವಣಿಸಿದ್ದರು.
ಬಾಂಬ್ ಗುರಿ ತಪ್ಪಿದ್ದರಿಂದ ನಕ್ಸಲರ ಸಂಚು ವಿಫಲವಾಗಿದೆ. ಕೆಎಸ್ಆರ್ಪಿ ಸಿಬ್ಬಂದಿಗಳಾದ ರಾಮದಾಸ್ ಹಾಗೂ ಶಂಕರ್ಸಿಂಗ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಫೋಟದ ತೀವ್ರತೆಗೆ ಕೆಸರು ಮಣ್ಣು ಸಿಡಿದು ಏನೂ ಕಾಣದಾದರೂ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು ನಕ್ಸಲರ ಮೇಲೆ ಒಂದು ಗಂಟೆ ಕಾಲ ಪ್ರತಿದಾಳಿ ನಡೆಸಿದರು. ಪ್ರತಿದಾಳಿಯಲ್ಲಿ ಕೆಲವು ನಕ್ಸಲರು ಗಾಯಗೊಂಡಿದ್ದಾರೆಂದು ಹೇಳಲಾಗಿದೆ. ಮಣ್ಣಿನಲ್ಲಿ ಹೂತುಹೋಗಿದ್ದ ಎರಡು ಪೊಲೀಸ್ ಜೀಪುಗಳನ್ನು, ಬಜರಂಗದಳ ಕಾರ್ಯಕರ್ತರು ಮೇಲಕ್ಕೆತ್ತಿ ತಂದಿದ್ದಾರೆ. ಇವುಗಳ ಪೈಕಿ ಒಂದು ಜೀಪು ಜಖಂಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು