ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಎನ್‌ಜಿಸಿ ದುರಂತದಲ್ಲಿ ಮೈಸೂರಿನ ಪ್ರದೀಪ್‌ ಬಲಿ

By Staff
|
Google Oneindia Kannada News

ಓಎನ್‌ಜಿಸಿ ದುರಂತದಲ್ಲಿ ಮೈಸೂರಿನ ಪ್ರದೀಪ್‌ ಬಲಿ
12 ಸಾವು, ಅಗ್ನಿ ದುರಂತದಲ್ಲಿ ನಾಪತ್ತೆಯಾದ ಏಳು ಮಂದಿಗೆ ವ್ಯಾಪಕ ಹುಡುಕಾಟ

ಮೈಸೂರು : ಮುಂಬಯಿಯಲ್ಲಿ ಬುಧವಾರ ಸಂಭವಿಸಿದ ಓಎನ್‌ಜಿಸಿ(ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆ) ಅಗ್ನಿ ದುರಂತದಲ್ಲಿ , ಮೈಸೂರು ಮೂಲದ ಅಧೀಕ್ಷಕ ಎಂಜಿನಿಯರ್‌ ಎಸ್‌.ಪ್ರದೀಪ್‌(45) ಬಲಿಯಾಗಿದ್ದಾರೆ.

ಕಳೆದ 20ವರ್ಷಗಳಿಂದ ಅವರು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿದ್ದ ಅವರು, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ವಿ.ಶ್ರೀನಿವಾಸಯ್ಯ ಅವರ ಪುತ್ರರು. ಪ್ರದೀಪ್‌ ಅವರು, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ.

ಈ ಅಗ್ನಿ ದುರಂತದಲ್ಲಿ ಮುಂಬಯಿ ಹೈ ಸಂಪೂರ್ಣ ಭಸ್ಮವಾಗಿದ್ದು, 1,10,000 ಬ್ಯಾರಲ್‌ನಷ್ಟು ತೈಲ ಉತ್ಪಾದನೆ ನಷ್ಟವಾಗಿದೆ. ಹನ್ನೆರಡು ಮಂದಿ ಮೃತಪಟ್ಟಿದ್ದು, ನಾಪತ್ತೆಯಾಗಿರುವ ಏಳು ಮಂದಿಗೆ ಹುಡುಕಾಟ ಮುಂದುವರೆದಿದೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X