ಸಿದ್ದರಾಮಯ್ಯ ಅವರ ಪದಚ್ಯುತಿಗೆ 40ಶಾಸಕರ ಸಹಿ
ಸಿದ್ದರಾಮಯ್ಯ
ಅವರ
ಪದಚ್ಯುತಿಗೆ
40ಶಾಸಕರ
ಸಹಿ
ಸಿದ್ದರಾಮಯ್ಯ
ಅವರನ್ನು
ಸೆಳೆಯಲು
ಕಾಂಗ್ರೆಸ್
ಮುಖಂಡರ
ಯತ್ನ
ಕುಮಾರಸ್ವಾಮಿ ಅವರ ಬಣ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗವಾಗಿಯೇ ಕಣಕ್ಕಿಳಿದಿದೆ. ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರೆಂದೇ ಗುರ್ತಿಸಿಕೊಂಡಿರುವ ಶಾಸಕರಾದ ಸೋಮಶೇಖರ್, ಮಹದೇವ್, ಕೃಷ್ಣಮೂರ್ತಿ, ಮೇಟಿ ಮತ್ತು ಬಿ.ಆರ್.ಪಾಟೀಲ್ ಅವರನ್ನು ಹೊರತುಪಡಿಸಿ, ಉಳಿದೆಲ್ಲ ಶಾಸಕರು ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡರಿಗೆ ಅವಿಶ್ವಾಸದ ಮನವಿ ಪತ್ರವನ್ನು ಸಲ್ಲಿಸುವುದಾಗಿ ಕುಮಾರಸ್ವಾಮಿ ಬಣ ಹೇಳಿಕೊಂಡಿದೆ. ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಿ ಜೆಡಿಎಸ್ನ ನಾಯಕತ್ವವಹಿಸಲು ಎಂ.ಪಿ.ಪ್ರಕಾಶ್ ಹಿಂಜರಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ನ ಮಾಜಿ ಸಚಿವರಾದ ವಿಶ್ವನಾಥ್, ಎಚ್.ಎಂ.ರೇವಣ್ಣ, ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತಿತರರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಂಗ್ರೆಸ್ಗೆ ಸೆಳೆಯುವ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು