ಸಿದ್ದು ಮತ್ತು ಗೌಡರ ಕದನಕ್ಕೆ ಜು.30ರಂದು ತಿರುವು?!
ಸಿದ್ದು
ಮತ್ತು
ಗೌಡರ
ಕದನಕ್ಕೆ
ಜು.30ರಂದು
ತಿರುವು?!
ಜೆಡಿಎಸ್
ಶಾಸಕಾಂಗ
ಪಕ್ಷದ
ಅಧ್ಯಕ್ಷ
ಸ್ಥಾನದಿಂದ
ಸಿದ್ದರಾಮಯ್ಯ
ಪದಚ್ಯುತಿಗೆ
ಹುನ್ನಾರ
ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಜೊತೆ ರಾಜ್ಯದ ವಿದ್ಯಮಾನಗಳ ಬಗೆಗೆ ಚರ್ಚೆ ನಡೆಸಿರುವ ದೇವೇಗೌಡ, ಜೆಡಿಎಸ್ ತಂಟೆಗೆ ಬಾರದಂತೆ ಕಾಂಗ್ರೆಸ್ ಮುಖಂಡರಿಗೆ ತಾಕೀತು ಹಾಕುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರ ಶರಣಾಗತಿ ಅಥವಾ ಅವರ ತಲೆದಂಡವನ್ನು ಗೌಡರ ಪರಿವಾರ ಬಯಸಿದೆ ಎನ್ನಲಾಗಿದೆ.
ಶಾಸಕಾಂಗ ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ತೆರವುಗೊಳಿಸಿ, ಆ ಸ್ಥಾನಕ್ಕೆ ಎಂ.ಪಿ.ಪ್ರಕಾಶ್ ಅವರನ್ನು ಆಯ್ಕೆ ಮಾಡಲು 53ಶಾಸಕರು ಸಮ್ಮತಿಸಿದ್ದಾರೆ ಎನ್ನುವ ಮೂಲಕ ಮತ್ತೊಂದೆಡೆ ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿ ಹತ್ತಿಸಿದ್ದಾರೆ. ಮುಂದಿನ ಬೆಳವಣಿಗೆಗಳ ಚರ್ಚಿಸಲು ಸಿದ್ದರಾಮಯ್ಯ ಅವರ ಬೆಂಬಲಿಗರು ಸಭೆ ನಡೆಸಿದ್ದಾರೆ.
ಜು.30ರಂದು ನಡೆಸಲುದ್ದೇಶಿಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ, ರಾಜ್ಯದ ರಾಜಕೀಯಕ್ಕೆ ಮಹತ್ವದ ತಿರುವು ನೀಡಿದರೆ ಅಚ್ಚರಿಯೇನಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು