ಮಂಗಳೂರಿನ ಓಎನ್ಜಿಸಿ ಯೋಜನೆಗೆ ಪ್ರಧಾನಿ ಅಸ್ತು
ಮಂಗಳೂರಿನ
ಓಎನ್ಜಿಸಿ
ಯೋಜನೆಗೆ
ಪ್ರಧಾನಿ
ಅಸ್ತು
ಇದು
ಸಮ್ಮಿಶ್ರ
ಸರ್ಕಾರದ
ಸಾಧನೆ
-ಎನ್.ಧರ್ಮಸಿಂಗ್
ಈ ಯೋಜನೆಯು ದ್ರವೀಕೃತ ನೈಸರ್ಗಿಕ ಅನಿಲ, ವಿದ್ಯುತ್ ಹಾಗೂ ಪೆಟ್ರೋ ರಾಸಾಯನಿಕಗಳನ್ನು ಉತ್ಪಾದಿಸಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ವಿಷಯಗಳನ್ನು ಪರಿಗಣಿಸಿದ ನಂತರ, ಯೋಜನೆಯನ್ನು ಕೈಗೆತ್ತಿಕೊಳ್ಳಲು ಓಎನ್ಜಿಸಿಗೆ ಪ್ರಧಾನಿ ಮನಮೋಹನ್ಸಿಂಗ್ ಪರವಾನಿಗೆ ಕೊಟ್ಟಿದ್ದಾರೆ.
ಮಂಗಳೂರು ಪೆಟ್ರೋ ಕೆಮಿಕಲ್ಸ್ ಸಂಕೀರ್ಣ ಯೋಜನೆಯಡಿ, ಓಎನ್ಜಿಸಿ ಮಂಗಳೂರಿನಲ್ಲಿ ಪೆಟ್ರೋ ಕೆಮಿಕಲ್ಸ್ ಮತ್ತು ಸುಗಂಧ ವಸ್ತು ತಯಾರಿಕಾ ಸ್ಥಾವರ(ರೂ.7475 ಕೋಟಿ), ದ್ರವೀಕೃತ ನೈಸರ್ಗಿಕ ಅನಿಲ ಘಟಕ(ರೂ.3590 ಕೋಟಿ), ಮಂಗಳೂರು- ಹಾಸನ- ಬೆಂಗಳೂರು-ಚೆನ್ನೈ ಅನಿಲ ಸಾಗಣೆ ಕೊಳವೆ ಮಾರ್ಗ ನಿರ್ಮಾಣ(ರೂ.945 ಕೋಟಿ), ಅನಿಲ ಆಧಾರಿತ 1500 ಮೆಗಾವ್ಯಾಟ್ ವಿದ್ಯುತ್ ಸ್ಥಾವರ, ಪಾಲಿಮರ್ ಉತ್ಪಾದನಾ ಘಟಕ ಸ್ಥಾಪನೆ ಮತ್ತು ವಿಶೇಷ ಆರ್ಥಿಕ ವಲಯ ಅಭಿವೃದ್ಧಿಪಡಿಸಲು ಎನ್ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಜೊತೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿತ್ತು.
ಕೇಂದ್ರ ಪೆಟ್ರೋಲಿಯಂ ಮತ್ತು ಇಂಧನ ಖಾತೆ ಸಚಿವ ಮಣಿಶಂಕರ್ ಅಯ್ಯರ್ ಎತ್ತಿದ್ದ ಅಪಸ್ವರದಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈಗ ಪ್ರಧಾನಿ ಸಮ್ಮತಿ ಸೂಚಿಸಿರುವುದರಿಂದ ಯೋಜನೆಗೆ ಎದುರಾಗಿದ್ದ ವಿಘ್ನ ದೂರವಾದಂತಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ