ಇನ್ನೆರಡು ದಿನಗಳಲ್ಲಿ ವಿನಿವಿಂಕ್ ಶಾಸ್ತ್ರೀ ಶರಣು?!
ಇನ್ನೆರಡು
ದಿನಗಳಲ್ಲಿ
ವಿನಿವಿಂಕ್
ಶಾಸ್ತ್ರೀ
ಶರಣು?!
ನಗರದ
ವಿವಿಧ
ಬ್ಲೇಡ್
ಕಂಪನಿಗಳತ್ತ
ಪೊಲೀಸರ
ಹದ್ದಿನ
ಕಣ್ಣು
ಗುರುವಾರ ಪೊಲೀಸರಿಗೆ ಶರಣಾಗಿರುವ ಸಂಸ್ಥೆಯ ಇಬ್ಬರು ನಿರ್ದೇಶಕರಿಂದ ಮಹತ್ವದ ವಿವರಗಳು ಪೊಲೀಸರಿಗೆ ಲಭ್ಯವಾಗಿವೆ. ಈವರೆಗೆ ಸಂಸ್ಥೆಯ ಏಳು ಮಂದಿ ನಿರ್ದೇಶಕರು ಶರಣಾಗಿದ್ದಾರೆ.
ಚೆನ್ನೈ ಹಾಗೂ ಆಂಧ್ರದಲ್ಲಿ ತನಿಖೆ ಪ್ರಗತಿಯಲ್ಲಿದೆ. ಲಭ್ಯ ಮಾಹಿತಿಗಳ ಪ್ರಕಾರ ಶಾಸ್ತ್ತ್ರಿ ವಿದೇಶಕ್ಕೆ ಹೋಗಿಲ್ಲ. ತಲೆ ಮರೆಸಿಕೊಂಡಿರುವ ಎಲ್ಲರೂ ಪಾಸ್ಪೋರ್ಟ್ ಹೊಂದಿದ್ದು, ಶ್ರೀನಿವಾಸ ಶಾಸ್ತ್ರಿ ಅವರ ತಾಯಿಗೆ ಪಾಸ್ಪೋರ್ಟ್ ಇಲ್ಲ ಎಂದು ತನಿಖಾ ತಂಡದ ಸಾರಥ್ಯವಹಿಸಿರುವ ಚಾಮರಾಜಪೇಟೆ ಉಪವಿಭಾಗದ ಎಸಿಪಿ ಎ. ಮೂರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಕಾರಣಿಗಳು ಮತ್ತು ಪ್ರತಿಷ್ಠಿತ ಅಧಿಕಾರಿಗಳ ಪತ್ನಿಯರು ವಿನಿವಿಂಕ್ನಲ್ಲಿ ಸಾಕಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದು, ಕಪ್ಪು ಹಣದ ರಹಸ್ಯ ಪತ್ತೆಯಾಗುತ್ತದೆ ಎಂಬ ಭಯದಿಂದ ದೂರು ಸಲ್ಲಿಸಿಲ್ಲ. ವಿನಿವಿಂಕ್ ವಿರುದ್ಧ ಈವರೆಗೆ 3400 ದೂರ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದ ವಿವಿಧ ಬ್ಲೇಡ್ ಕಂಪನಿಗಳತ್ತ ಪೊಲೀಸರು ಗಮನ ಹರಿಸಿದ್ದು, ನಾಗರಬಾವಿಯ ಯೋಗ ಫೌಂಡೇಶನ್, ಚಂದ್ರಾ ಲೇಔಟ್ನ ಸತ್ಯಸಾಯಿ ಹಣಕಾಸು ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ಬಗೆಗೆ ತನಿಖೆ ನಡೆಸುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು