ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಡಿಗೇಡಿಗಳಿಗೆ ಆಟಿಕೆಯಾದ ಕುರುಗೋಡು ದೇವಸ್ಥಾನ!

By Staff
|
Google Oneindia Kannada News

ಕಿಡಿಗೇಡಿಗಳಿಗೆ ಆಟಿಕೆಯಾದ ಕುರುಗೋಡು ದೇವಸ್ಥಾನ!
ನಂದಿ ವಿಗ್ರಹ ಧ್ವಂಸದ ಹಿನ್ನೆಲೆ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ

ಬಳ್ಳಾರಿ : ಜಿಲ್ಲೆಯ ಕುರುಗೋಡು ಪಟ್ಟಣದ ವಜ್ರಬಂಡೆ ಬಸಪ್ಪ ದೇವಲಾಯದಲ್ಲಿನ ಆರು ಅಡಿ ಎತ್ತರದ ನಂದಿ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ.

ಬಳ್ಳಾರಿಗೆ 40ಕಿ.ಮೀ ಅಂತರದಲ್ಲಿರುವ ದೇವಾಲಯಗಳ ಪಟ್ಟಣ ಕುರುಗೋಡುನಲ್ಲಿ ಇಂತಹ ಘಟನೆಗಳು ಪದೇಪದೇ ಮರುಕಳಿಸುತ್ತಿವೆ. 2000ನೇ ಇಸವಿಯಲ್ಲಿ ಪಂಚಮುಖಿ ಗಣೇಶನ ವಿಗ್ರಹವನ್ನು, 2004ರಲ್ಲಿ ಉಜ್ಜಳೇಶ್ವರ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆಗಳು ಹಸಿಯಾಗಿಡುವಾಗಲೇ ಈ ಘಟನೆ ನಡೆದಿದೆ. ಪೊಲೀಸರು ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.

ಇಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ಧ್ವಂಸಗೊಳಿಸಿದ್ದನ್ನು ಖಂಡಿಸಿ ಪಕ್ಷರಹಿತವಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ ಈ ಬಗೆಗೆ ಗಮನಹರಿಸಬೇಕು. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X