ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪೊಲೀಸ್ ದೌರ್ಜನ್ಯ ವಿರೋಧಿಸಿ ಶ್ರೀಪತಿ ಧರಣಿ
ಪೊಲೀಸ್
ದೌರ್ಜನ್ಯ
ವಿರೋಧಿಸಿ
ಶ್ರೀಪತಿ
ಧರಣಿ
ಅನವಶ್ಯಕವಾಗಿ
ಬಂಧಿಸಿ,
ನನ್ನನ್ನು
ಹಿಂಸಿಸಿದ
ಪೊಲೀಸರಿಗೆ
ಶಿಕ್ಷೆಯಾಗಲಿ
-ಶ್ರೀಪತಿರಾವ್
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಕಾನೂನು ವಿರೋಧಿ ಕೆಲಸಗಳನ್ನು ಆಕ್ಷೇಪಿಸ ಕಾರಣ ನನ್ನನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಭಯೋತ್ಪಾದನೆ ವಿರುದ್ಧ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಹಲ್ಲೆ ನಡೆಸಿದರು ಎಂದರು.
ಪೊಲೀಸರ ಈ ಅಮಾನವೀಯ ನೀತಿ ಖಂಡಿಸಿ ಜೂನ್ 28ರಂದು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರೂ ಫಲ ಸಿಕ್ಕಿಲ್ಲ. ಒಂದು ವೇಳೆ ಈ ದೂರಿಗೆ ಸರಿಯಾದ ಪ್ರತಿಕ್ರಿಯೆ ದೊರೆಯದಿದ್ದಲ್ಲ್ಲಿ, ಜುಲೈ 24ರಂದು ಮಹಾತ್ಮಾಗಾಂಧಿ ರಸ್ತೆಯ ಗಾಂಧಿ ಪ್ರತಿಮೆಯ ಎದುರು ಸಾಂಕೇತಿಕ ಧರಣಿ ನಡೆಸಲಾಗುವುದು.
ಒಂದು ವೇಳೆ ಧರಣಿಯ ನಂತರವೂ ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ, ಆಗಸ್ಟ್ 1ರಿಂದ ಗಾಂಧಿ ಪ್ರತಿಭೆಯ ಬಳಿ ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಶ್ರೀಪತಿರಾವ್ ಎಚ್ಚರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, July 19, 2005, 23:53 [IST]