ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೊಳ್ಳಿ ಕನ್ನಡ ಪ್ರೀತಿಗೆ ವಕೀಲರ ಸಂಘದ ಅಭಿನಂದನೆ

By Staff
|
Google Oneindia Kannada News

ಸಂಗೊಳ್ಳಿ ಕನ್ನಡ ಪ್ರೀತಿಗೆ ವಕೀಲರ ಸಂಘದ ಅಭಿನಂದನೆ
ಕಿರಿಯ ನ್ಯಾಯಾವಾದಿಗಳಿಗೆ ಸಂಗೊಳ್ಳಿ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುವುದು -ಡಿ.ಎಲ್‌.ಜಗದೀಶ್‌

ಬೆಂಗಳೂರು : ನಗರ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಎಲ್ಲೆಲ್ಲೂ ಕನ್ನಡದ ಕಂಪು ಹರಡಿತ್ತು, ಕಾರಣ ಅಲ್ಲಿ ಅಪೂರ್ವ ಕನ್ನಡಾಭಿಮಾನಿ ನಿವೃತ್ತ ನ್ಯಾಯಾಧೀಶ ಎನ್‌.ಎಸ್‌.ಸಂಗೊಳ್ಳಿ ಅವರ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ನ್ಯಾಯಾಧೀಶರಾಗಿದ್ದ ಅವಧಿಯುದ್ದಕ್ಕೂ ಕನ್ನಡದಲ್ಲಿಯೇ ತೀರ್ಪು ನೀಡಿ ಮಾತೃಭಾಷಾಭಿಮಾನ ಮೆರೆದ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್‌.ಎಸ್‌.ಸಂಗೊಳ್ಳಿ ಅವರನ್ನು, ಬೆಂಗಳೂರು ವಕೀಲರ ಸಂಘ ಅಭಿನಂದಿಸಿತು.

ಕನ್ನಡದಲ್ಲಿ ಅತಿ ಹೆಚ್ಚು ತೀರ್ಪು ಬರೆದ ಸಾಧನೆ ಮೆರೆದಿರುವ ನಿವೃತ್ತ ನ್ಯಾಯಾಧೀಶ ಎನ್‌.ಎಸ್‌.ಸಂಗೊಳ್ಳಿ ಅವರು, ಕಾನೂನಿನ ಎಲ್ಲ ವಿಷಯಗಳ ಕುರಿತು 35 ಪುಸ್ತಕಗಳನ್ನು ಬರೆದಿದ್ದಾರೆ. ಆ ಮೂಲಕ ಶ್ರೀಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು ಶ್ರಮಿಸಿದ್ದಾರೆ.

‘ಕನ್ನಡದಲ್ಲಿ ತೀರ್ಪು ಬರೆಯುವುದು ಹೇಗೆ?’ ಎಂಬುದು ಅವರ ಇತ್ತೀಚಿನ ಪುಸ್ತಕ. ಅವರು ಸಂವಿಧಾನದ ಕುರಿತೂ ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬರೆದಿರುವ ಪುಸ್ತಕಗಳ ಒಂದು ಸಾವಿರ ಪ್ರತಿಯನ್ನು ಬೆಂಗಳೂರು ವಕೀಲರ ಸಂಘ ಕೊಂಡು, ಅವುಗಳನ್ನು ಕಿರಿಯ ನ್ಯಾಯವಾದಿಗಳಿಗೆ ಉಚಿತವಾಗಿ ವಿತರಿಸಲಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ಎಲ್‌.ಜಗದೀಶ್‌ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಬೆಂಗಳೂರು ನಗರ ಸಿವಿಲ್‌ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅರಳಿ ನಾಗರಾಜ್‌, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X