ಸಂಗೊಳ್ಳಿ ಕನ್ನಡ ಪ್ರೀತಿಗೆ ವಕೀಲರ ಸಂಘದ ಅಭಿನಂದನೆ
ಸಂಗೊಳ್ಳಿ
ಕನ್ನಡ
ಪ್ರೀತಿಗೆ
ವಕೀಲರ
ಸಂಘದ
ಅಭಿನಂದನೆ
ಕಿರಿಯ
ನ್ಯಾಯಾವಾದಿಗಳಿಗೆ
ಸಂಗೊಳ್ಳಿ
ಪುಸ್ತಕಗಳನ್ನು
ಉಚಿತವಾಗಿ
ವಿತರಿಸಲಾಗುವುದು
-ಡಿ.ಎಲ್.ಜಗದೀಶ್
ನ್ಯಾಯಾಧೀಶರಾಗಿದ್ದ ಅವಧಿಯುದ್ದಕ್ಕೂ ಕನ್ನಡದಲ್ಲಿಯೇ ತೀರ್ಪು ನೀಡಿ ಮಾತೃಭಾಷಾಭಿಮಾನ ಮೆರೆದ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್.ಎಸ್.ಸಂಗೊಳ್ಳಿ ಅವರನ್ನು, ಬೆಂಗಳೂರು ವಕೀಲರ ಸಂಘ ಅಭಿನಂದಿಸಿತು.
ಕನ್ನಡದಲ್ಲಿ ಅತಿ ಹೆಚ್ಚು ತೀರ್ಪು ಬರೆದ ಸಾಧನೆ ಮೆರೆದಿರುವ ನಿವೃತ್ತ ನ್ಯಾಯಾಧೀಶ ಎನ್.ಎಸ್.ಸಂಗೊಳ್ಳಿ ಅವರು, ಕಾನೂನಿನ ಎಲ್ಲ ವಿಷಯಗಳ ಕುರಿತು 35 ಪುಸ್ತಕಗಳನ್ನು ಬರೆದಿದ್ದಾರೆ. ಆ ಮೂಲಕ ಶ್ರೀಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು ಶ್ರಮಿಸಿದ್ದಾರೆ.
‘ಕನ್ನಡದಲ್ಲಿ ತೀರ್ಪು ಬರೆಯುವುದು ಹೇಗೆ?’ ಎಂಬುದು ಅವರ ಇತ್ತೀಚಿನ ಪುಸ್ತಕ. ಅವರು ಸಂವಿಧಾನದ ಕುರಿತೂ ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬರೆದಿರುವ ಪುಸ್ತಕಗಳ ಒಂದು ಸಾವಿರ ಪ್ರತಿಯನ್ನು ಬೆಂಗಳೂರು ವಕೀಲರ ಸಂಘ ಕೊಂಡು, ಅವುಗಳನ್ನು ಕಿರಿಯ ನ್ಯಾಯವಾದಿಗಳಿಗೆ ಉಚಿತವಾಗಿ ವಿತರಿಸಲಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ಎಲ್.ಜಗದೀಶ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅರಳಿ ನಾಗರಾಜ್, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು