ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂತುರು ನೀರಾವರಿಗೆ ಶೇ.70 ಸಬ್ಸಿಡಿ : ಅಲಂಗೂರು

By Staff
|
Google Oneindia Kannada News

ತುಂತುರು ನೀರಾವರಿಗೆ ಶೇ.70 ಸಬ್ಸಿಡಿ : ಅಲಂಗೂರು
ಸರ್ಕಾರಕ್ಕೆ ವಾರ್ಷಿಕ 22ಕೋಟಿ ರೂ. ಹೊರೆ ಬೀಳುವ ನಿರೀಕ್ಷೆ

ಬೆಂಗಳೂರು : ತುಂತುರು ನೀರಾವರಿಯಿಂದ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿರುವ ಎಲ್ಲ ಜಿಲ್ಲೆಗಳ ರೈತರಿಗೂ ಶೇ.70ರಷ್ಟು ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತೋಟಗಾರಿಕಾ ಸಚಿವ ಅಲಂಗೂರು ಶ್ರೀನಿವಾಸ್‌ ತಿಳಿಸಿದರು.

ಬುಧವಾರ ಅವರು ವಿಧಾನ ಪರಿಷತ್‌ನಲ್ಲಿ ಪ್ರಶ್ನೆಯಾಂದಕ್ಕೆ ಉತ್ತರಿಸಿ ಮಾತನಾಡುತ್ತಿದ್ದರು. ಇದುವರೆಗೆ ಕೋಲಾರ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಮಾತ್ರ ತುಂತುರು ನೀರಾವರಿಗೆ ಶೇ.100 ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ತೋಟಗಾರಿಕೆ ಪ್ರಮುಖ ಬೆಳೆ ಆಗಿರುವುದರಿಂದ ಎಲ್ಲ ಜಿಲ್ಲೆಗಳ ರೈತರಿಗೂ ಶೇ.70ರಷ್ಟು ಸಬ್ಸಿಡಿ ನೀಡಲು ಇಲಾಖೆ ಶಿಫಾರಸು ಮಾಡಿದೆ ಎಂದು ಹೇಳಿದರು.

ರಾಜ್ಯದ 27 ಜಿಲ್ಲೆಗಳಲ್ಲಿ ತುಂತುರು ನೀರಾವರಿಯಿಂದ ಬೆಳೆ ಬೆಳೆಯುವ ರೈತರಿಗೆ ಶೇ.70ರಷ್ಟು ಸಬ್ಸಿಡಿ ನೀಡುವುದರಿಂದ ಸರ್ಕಾರಕ್ಕೆ ವಾರ್ಷಿಕ 22 ಕೋಟಿ ರೂಪಾಯಿಹೊರೆ ಬೀಳಲಿದೆ. ಹಾಲಿ ಬಿಲ್‌ ಪಾವತಿಗೆ ಸರ್ಕಾರದ ಬಳಿ ಕೇವಲ ಮೂರು ಕೋಟಿ ರೂಪಾಯಿಗಳಷ್ಟೇ ಇದೆ. ಹೆಚ್ಚುವರಿ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಹಣಕಾಸು ಸಚಿವರ ಜೊತೆಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀನಿವಾಸ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X