ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಣಿ, ಪ್ರತಿಭಟನೆಗಳಿಗೆ ನಗರದಲ್ಲಿ ಪ್ರತ್ಯೇಕ ಪ್ರದೇಶ

By Staff
|
Google Oneindia Kannada News

ಧರಣಿ, ಪ್ರತಿಭಟನೆಗಳಿಗೆ ನಗರದಲ್ಲಿ ಪ್ರತ್ಯೇಕ ಪ್ರದೇಶ
ಅರಮನೆ ಮೈದಾನದಲ್ಲಿ ಧರಣಿ, ಬಹಿರಂಗ ಸಭೆ ನಡೆಸಿದ ರಾಜಕೀಯ ಪಕ್ಷಗಳಿಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು : ರಾಜಕೀಯ ಪಕ್ಷ ಮತ್ತು ವಿವಿಧ ಸಂಘಟನೆಗಳು ನಡೆಸುವ ಧರಣಿ, ಪ್ರತಿಭಟನೆ ಮತ್ತು ರ್ಯಾಲಿಗಳಿಂದ ನಗರದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತದೆ ಎಂದು ಇನ್ನುಮುಂದೆ ಗೊಣಗುವಂತಿಲ್ಲ !

ಧರಣಿ, ಪ್ರತಿಭಟನೆಯ ಉದ್ದೇಶಕ್ಕಾಗಿಯೇ ನಗರದಲ್ಲಿ ಆರು ಎಕರೆ ಮೈದಾನವನ್ನು ಮೀಸಲಿಡುವುದಾಗಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಸೋಮವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ನಗರದ ಶೇಷಾದ್ರಿ ರಸ್ತೆಯ 22 ಎಕರೆ ವಿಶಾಲವಾದ ಹಳೆ ಸೆಂಟ್ರಲ್‌ ಜೈಲಿನ ಸುಮಾರು ಆರು ಎಕರೆ ಪ್ರದೇಶ ಇನ್ನು ಮುಂದೆ ಧರಣಿಗೆ ಮೀಸಲಾಗಲಿದೆ. ಈ ಹಿಂದೆ ಕಬ್ಬನ್‌ಪಾರ್ಕ್‌ನಲ್ಲಿ ಧರಣಿ ಚಟುವಟಿಕೆಗಳಿಗೆ ಅವಕಾಶವಿತ್ತು. ಹೈಕೋರ್ಟ್‌ ಆದೇಶದನ್ವಯ ಅಲ್ಲೀಗ ಧರಣಿಗೆ ಅವಕಾಶವಿಲ್ಲ. ನಂತರದ ದಿನಗಳಲ್ಲಿ ಅರಮನೆ ಮೈದಾನ ಧರಣಿ ಮತ್ತು ಬಹಿರಂಗ ಸಭೆಗಳ ತಾಣವಾಯಿತು.

ಅರಮನೆ ಮೈದಾನದಲ್ಲಿ ಧರಣಿ ನಡೆಸಿದ ರಾಜಕೀಯ ಪಕ್ಷಗಳಿಗೆ ಮತ್ತು ಸಂಘಟನೆಗಳಿಗೆ ಹೈಕೋರ್ಟ್‌ ನೋಟಿಸ್‌ ನೀಡಿದ ಬೆನ್ನಲ್ಲಿ, ಸರ್ಕಾರ ಈ ಉದ್ದೇಶಕ್ಕಾಗಿಯೇ ಹಳೆ ಸೆಂಟ್ರಲ್‌ ಜೈಲಿನ ಪ್ರದೇಶದಲ್ಲಿ ಆರು ಎಕರೆ ಮೀಸಲಿಟ್ಟಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X