ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರು ಕುಖ್ಯಾತ ಪಾತಕಿಗಳು ಎನ್‌ಕೌಂಟರ್‌ನಲ್ಲಿ ಬಲಿ

By Staff
|
Google Oneindia Kannada News

ಇಬ್ಬರು ಕುಖ್ಯಾತ ಪಾತಕಿಗಳು ಎನ್‌ಕೌಂಟರ್‌ನಲ್ಲಿ ಬಲಿ
ಸಾಹಸ ಮೆರೆದ ವಿಜಾಪುರ ಪೊಲೀಸರು, ಕುಖ್ಯಾತ ಪಾತಕಿಗಳಾದ ಗಣಪತಿ, ಯಲಗೂರಪ್ಪ ಬಲಿ

ವಿಜಾಪುರ : ಹಲವು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ರೌಡಿಗಳು ಮಂಗಳವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾರೆ.

ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಖಾಜಪ್ಪ ಅಲಿಯಾಸ್‌ ಗಣಪತಿ ಮತ್ತು ಯಲಗೂರಪ್ಪ ಮೃತಪಟ್ಟಿದ್ದು, ನಗರದಿಂದ 26 ಕಿಲೋ ಮೀಟರ್‌ ದೂರದಲ್ಲಿರುವ ಮಿಂಚನಾಳ ರೈಲ್ವೇ ಸ್ಟೇಷನ್‌ ಹತ್ತಿರ ಎನ್‌ಕೌಂಟರ್‌ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ಸೀಮಂತ್‌ಕುಮಾರ್‌ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೋಮವಾರ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ, ಇಂಡಿ ತಾಲ್ಲೂಕಿನ ಗುಣಕಿ ಗ್ರಾಮಕ್ಕೆ ಬಂದಿದ್ದ ಗಣಪತಿ ಮತ್ತು ಯಲಗೂರಪ್ಪ ಅಲ್ಲಿ ಶಂಕರಪ್ಪ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು. ಈ ಕುರಿತು ಶಂಕರಪ್ಪ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಕಾರ್ಯ ಪ್ರವೃತ್ತರಾದರು.

ರೈಲ್ವೇ ಸ್ಟೇಷನ್‌ನಲ್ಲಿ ಪೊಲೀಸರನ್ನು ಕಂಡ ಆರೋಪಿಗಳು, ಅಲ್ಲಿಂದ ಓಟಕಿತ್ತರು. ಅವರನ್ನು ಬೆನ್ನಟ್ಟಿದ ಪೊಲೀಸರತ್ತ ಕಲ್ಲುಗಳನ್ನು ಎಸೆದದ್ದರಿಂದ ಪೊಲೀಸರು ಗುಂಡು ಹಾರಿಸಿದರು. ಮೃತಪಟ್ಟ ಗಣಪತಿ ಐದು ಮತ್ತು ಯಲಗೂರಪ್ಪ ಮೂರು ಹತ್ಯೆಪ್ರಕರಣಗಳಲ್ಲಿ ಶಾಮೀಲಾಗಿದ್ದರು. ಈ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ ಒಬ್ಬರು ಗಾಯಗೊಂಡಿದ್ದು, ಒಂದು ಜೀಪು ಜಖಂಗೊಂಡಿದೆ ಎಂದು ಸೀಮಂತ್‌ಕುಮಾರ್‌ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X