‘ಅನಿವಾಸಿ ಭಾರತೀಯ ವೈದ್ಯರ ಧೋರಣೆ ಸಲ್ಲದು’
‘ಅನಿವಾಸಿ
ಭಾರತೀಯ
ವೈದ್ಯರ
ಧೋರಣೆ
ಸಲ್ಲದು’
ಎಂ.ಪಿ.ಪ್ರಕಾಶ್
ಹುಟ್ಟುಹಬ್ಬದ
ಹಿನ್ನೆಲೆ
ನಾನಾ
ಕಾರ್ಯಕ್ರಮಗಳು
ಸಚಿವ ಎಂ.ಪಿ.ಪ್ರಕಾಶ್ ಅವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದಲ್ಲಿ ಆಯೋಜಿಸಲಾಗಿದ್ದ ಹೃದಯ ಮತ್ತು ಕಣ್ಣಿನ ಉಚಿತ ತಪಾಸಣೆ ಹಾಗೂ ಮಧುಮೇಹದ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಮೆರಿಕದ ಶೇಕಡಾ 39ರಷ್ಟು ವೈದ್ಯರು ಭಾರತೀಯರು. ಅಲ್ಲಿನ ಇಡೀ ವೈದ್ಯ ವ್ಯವಸ್ಥೆ ಭಾರತೀಯ ವೈದ್ಯರನ್ನು ಅವಲಂಬಿಸಿದೆ. ಆದರೆ ಭಾರತದ ಹಳ್ಳಿಗಳಲ್ಲಿ ಕೆಲಸ ಮಾಡಲು ವೈದ್ಯರು ಹಿಂಜರಿಯುತ್ತಾರೆ. 103 ಕೋಟಿ ಜನಸಂಖ್ಯೆಯಲ್ಲಿ 26ಕೋಟಿ ಕಡುಬಡವರಿದ್ದಾರೆ. ಇವರಲ್ಲಿ ಶೇಕಡಾ 80ರಷ್ಟು ಹಳ್ಳಿಗಾಡಿನಲ್ಲಿ ವಾಸಿಸುತ್ತಾರೆ. ಇವರಿಗೆ ಚಿಕಿತ್ಸೆಯ ವೆಚ್ಚ ಭರಿಸುವ ಶಕ್ತಿಯಿಲ್ಲ. ಇಂತಹ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವ ವೈದ್ಯರ ಕೊರತೆ ಇದೆ ಎಂದು ಹೇಳಿದರು.
ಕರ್ನಾಟಕ, ಬಿಹಾರ ಮತ್ತು ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಶೇಕಡಾ 25ರಿಂದ 30ರಷ್ಟು ಸರ್ಕಾರಿ ವೈದ್ಯರು ಸೇವೆಗೆ ಹಾಜರಾಗದೇ ವೇತನ ಪಡೆಯುತ್ತಿರುವುದ ಅಧ್ಯಯನದಿಂದ ತಿಳಿದುಬಂದಿದೆ. ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕಿಂಚಿತ್ತೂ ಸುಧಾರಣೆಯಾಗಿಲ್ಲ ಎಂದು ರಾಜಶೇಖರನ್ ವಿಷಾದ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು