ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಕರ್ನಾಟಕ ಸಂಚಾರಿ ಪೀಠ ಚಳವಳಿಗೆ ಮತ್ತೆ ಕಾವು

By Staff
|
Google Oneindia Kannada News

ಉ.ಕರ್ನಾಟಕ ಸಂಚಾರಿ ಪೀಠ ಚಳವಳಿಗೆ ಮತ್ತೆ ಕಾವು
ಧಾರವಾಡದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ

ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಮತ್ತೆ ಹೈಕೋರ್ಟ್‌ ಪೀಠ ಚಳವಳಿ ಬಿಸಿಯೇರುವ ಸಾಧ್ಯತೆಗಳಿವೆ.ಅವಳಿ ನಗರಗಳಲ್ಲಿ ರಾಜ್ಯ ಸರ್ಕಾರ ಮೂಲ ಸೌಕರ್ಯ ಕಲ್ಪಿಸದ ಕಾರಣ, ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪನೆ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅವರು ಮುಖ್ಯಮಂತ್ರಿ ಧರ್ಮಸಿಂಗ್‌ ಅವರಿಗೆ ಬರೆದ ಪತ್ರ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಪೀಠ ಚಳವಳಿಗೆ ಮತ್ತೆ ಜೀವ ಬಂದಿದೆ.

ನ್ಯಾಯಮೂರ್ತಿ ಅವರು ಬರೆದ ಪತ್ರವನ್ನು ಸರ್ಕಾರ ಬಹಿರಂಗಪಡಿಸದೇ, ಮೋಸ ಮಾಡಿದೆ ಎಂದು ಧಾರವಾಡ ವಕೀಲರ ಸಂಘ ಸಿವಿಲ್‌ ನ್ಯಾಯಾಲಯದ ಗಾಜುಗಳ ಒಡೆದು ಸೋಮವಾರ ಪ್ರತಿಭಟಿಸಿದೆ.

ಹೋರಾಟಗಾರರು ಸೋಮವಾರ ಹಠಾತ್ತನೇ ರಸ್ತೆ ತಡೆ ನಡೆಸಿ, ಅರ್ಧ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದರು. ನ್ಯಾಯಾಲಯದ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಯತ್ನಿಸಿದಾಗ ವಾಗ್ವಾದ ನಡೆದು, 6ಮಂದಿ ನ್ಯಾಯವಾದಿಗಳು ಸೇರಿದಂತೆ 7ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಕಾರದ ನಿಧಾನ ನೀತಿ ಮತ್ತು ಬೇಜವಬ್ದಾರಿಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X