ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ
ಕಳಸಾ
ಬಂಡೂರಿ
ಯೋಜನೆ
ಅನುಷ್ಠಾನಕ್ಕೆ
ಸರ್ಕಾರ
ಬದ್ಧ
ಯೋಜನೆ
ಪೂರ್ಣವಾದರೆ
ಹುಬ್ಬಳ್ಳಿ-ಧಾರವಾಡ
ಮತ್ತು
ಬೆಳಗಾವಿಗೆ
ಕುಡಿಯುವ
ನೀರು
ಮಂಗಳವಾರ ವಿಧಾನ ಸಭೆಯಲ್ಲಿ ಈ ಯೋಜನೆಯ ವಿಳಂಬ ಕುರಿತು ಪ್ರತಿಪಕ್ಷಗಳು ಪ್ರಶ್ನಿಸಿದಾಗ ಧರ್ಮಸಿಂಗ್ ಪ್ರತಿಕ್ರಿಯಿಸಿ, ಯೋಜನೆ ಕೈಗೆತ್ತಿಕೊಳ್ಳಲು ಅಂತರಾಜ್ಯ ನದಿ ನೀರು ವಿವಾದ ಕಾರಣವಾಗಿದೆ. ಈ ಕುರಿತು ಗೋವಾ ರಾಜ್ಯ ತಕರಾರು ತೆಗೆದಿದೆ ಎಂದರು.
ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಬದ್ಧವಿದೆ. ಇದು ಮಹಾದಾಯಿ ನದಿಗೆ ಅಡ್ಡವಾಗಿ ಕಟ್ಟುವ ಉದ್ದೇಶಿತ ಯೋಜನೆಯಾಗಿದೆ. ಇದರಿಂದ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದರು.
ಇದಕ್ಕೂ ಮೊದಲು ಮಾತನಾಡಿದ ಜಲಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ, ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯವು ತನ್ನ ಪಾಲಿನ 7.56 ಟಿಎಂಸಿ ನೀರು ಬಳಸಿಕೊಂಡು ಕುಡಿಯಲು ಸರಬರಾಜು ಮಾಡಲಿದೆ. ಈ ಕುರಿತು ರೈತರ ಕೈಗೊಂಡಿರುವ ಅನಿರ್ದಿಷ್ಟ ಕಾಲದ ಉಪವಾಸವನ್ನು ಬಿಡಬೇಕೆಂದು ಮನವಿ ಮಾಡಿದರು.
ಕೃಷ್ಣಾ ಕಣಿವೆಯಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು ಅಕ್ರಮ ಯೋಜನೆಗಳನ್ನು ಕೈಗೊಂಡಿವೆ. ಗೋವಾದ ವಿರೋಧ ಲೆಕ್ಕಿಸದೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ವಿರೋಧ ಪಕ್ಷ ಬಿಜೆಪಿಯ ಜಗದೀಶ್ಶೆಟ್ಟರ್ ಮತ್ತು ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ