ಧರಣಿ ಕೈಬಿಟ್ಟ ಬಿಜೆಪಿ : ಕಲಾಪದಲ್ಲಿ ಅಲ್ಪ ಚೇತರಿಕೆ
ಧರಣಿ
ಕೈಬಿಟ್ಟ
ಬಿಜೆಪಿ
:
ಕಲಾಪದಲ್ಲಿ
ಅಲ್ಪ
ಚೇತರಿಕೆ
ನನ್ನ
ಇಲಾಖೆಯಲ್ಲಿ
ಅವ್ಯವಹಾರ
ನಡೆದಿಲ್ಲ
-
ಎಚ್.ಡಿ.ರೇವಣ್ಣ
ಲೋಕೋಪಯೋಗಿ ಮತ್ತು ವಿದ್ಯುತ್ ಖಾತೆ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ವಾರ್ತಾಸಚಿವ ಬಿ.ಶಿವರಾಂ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ, ಸರ್ಕಾರವನ್ನು ಪೇಚಿಗೆ ಸಿಲುಕಿಸಿತ್ತು.
ರೇವಣ್ಣ ಅವರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಎಂಬ ಶಿವರಾಂ ಉತ್ತರ ಪ್ರತಿಪಕ್ಷವನ್ನು ಕೆರಳಿಸಿತ್ತು.
ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಚಿವ ಎಚ್.ಡಿ.ರೇವಣ್ಣ, ನನ್ನ ಇಲಾಖೆಗಳಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಈ ಕುರಿತು ಮಾಡಲಾಗಿರುವ ಆರೋಪ ಆಧಾರರಹಿತ. ಬಾಕಿ ಇರುವ ಬಿಲ್ಲುಗಳನ್ನು ಸೂಚನೆಗಳನ್ನು ಅನುಸರಿಸಿ ಪಾವತಿಸಲಾಗುತ್ತಿದೆ. ನನ್ನ ಮೇಲೆ ಮಾಡಲಾಗಿರುವ ಆರೋಪ ವಿಷಾದಕರ. ನನ್ನ ಲಕ್ಷ್ಯವೇನಿದ್ದರೂ ಅಭಿವೃದ್ಧಿಯತ್ತ. ಅಭಿವೃದ್ಧಿ ಮತ್ತು ರಾಜಕಾರಣವನ್ನು ನಾನು ಬೆರೆಸಿಲ್ಲ . ವಿರೋಧ ಪಕ್ಷ ಧರಣಿ ವಾಪಸು ಪಡೆದು ಕಲಾಪ ಸುಗಮವಾಗಿ ನಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
(ಪಿಟಿಐ)
ಮುಖಪುಟ / ವಾರ್ತೆಗಳು