ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ.ಪಿ.ಪ್ರಕಾಶ್‌-65, ದಾವಣಗೆರೆಯಲ್ಲಿ ಅಭಿನಂದನೆ

By Staff
|
Google Oneindia Kannada News

ಎಂ.ಪಿ.ಪ್ರಕಾಶ್‌-65, ದಾವಣಗೆರೆಯಲ್ಲಿ ಅಭಿನಂದನೆ
ಟಿ.ಎನ್‌.ಸೀತಾರಾಂ ಅವರಿಂದ ‘ಸದನದಲ್ಲಿ ಎಂ.ಪಿ.ಪ್ರಕಾಶ್‌’ ಪುಸ್ತಕ ಬಿಡುಗಡೆ

ದಾವಣಗೆರೆ : ಕಂದಾಯ ಸಚಿವ ಎಂ.ಪಿ.ಪ್ರಕಾಶ್‌ ಅವರು 65ನೇ ವಸಂತಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ನಗರದ ಸಾಹಿತಿಗಳ ಬಳಗ ಜುಲೈ 11ರಂದು ಅವರನ್ನು ಸನ್ಮಾನಿಸಲಿದೆ.

ಈ ಸಮಾರಂಭದಲ್ಲಿ ಎಂ.ಪಿ. ಪ್ರಕಾಶ್‌ ಅವರ ಖಾಸಗಿ, ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯಕ ಬದುಕಿನ ವಿವರಗಳನ್ನೊಳಗೊಂಡ ‘ಸಮಾಜಮುಖಿ’ ಎಂಬ ಪುಸ್ತಕವನ್ನು ನಾಡೋಜ ಪ್ರಶಸ್ತಿ ವಿಜೇತ ಹಿರಿಯ ಕವಿ ಚೆನ್ನವೀರ ಕಣವಿ ಬಿಡುಗಡೆ ಮಾಡುವರು.

ಎಂ.ಪಿ.ಪ್ರಕಾಶ್‌ ಬರೆದಿರುವ ‘ಸೂರ್ಯ ಶಿಖಾರಿ’ ನಾಟಕದ ದ್ವಿತೀಯ ಆವೃತ್ತಿಯನ್ನು ಹಿರಿಯ ನಾಟಕಕಾರ ಪ್ರೊ.ಕೆ.ಮರುಳಸಿದ್ಧಪ್ಪ ಬಿಡುಗಡೆ ಮಾಡುವರು. ಸದನದಲ್ಲಿ ಎಂ.ಪಿ.ಪ್ರಕಾಶ್‌ ಎನ್ನುವ ಪುಸ್ತಕವನ್ನು ನಿರ್ದೇಶಕ ಟಿ.ಎನ್‌.ಸೀತಾರಾಮ್‌ ಬಿಡುಗಡೆಗೊಳಿಸುವರು.

ಸಮಾರಂಭದಲ್ಲಿ ಶಿವಮೊಗ್ಗ ಸುಬ್ಬಣ್ಣ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X