ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗದ ಇಂಜಿನಿಯರ್‌ನ ಕೊಂದ ಹಂತಕನಿಗೆ ಗಲ್ಲು

By Staff
|
Google Oneindia Kannada News

ಚಿತ್ರದುರ್ಗದ ಇಂಜಿನಿಯರ್‌ನ ಕೊಂದ ಹಂತಕನಿಗೆ ಗಲ್ಲು
ಗುತ್ತಿಗೆ ಕೆಲಸ ನೀಡದ ಕಾರಣ ಸಿದ್ಧಾರೂಡ ಕತ್ತು ಕೊಯ್ದ !

ಚಿತ್ರದುರ್ಗ : ಎರಡೂವರೆ ವರ್ಷಗಳ ಹಿಂದೆ ಹಾಡುಹಗಲೇ ಜಿಲ್ಲಾ ಪಂಚಾಯ್ತಿ ಇಂಜಿನಿಯರ್‌ ಒಬ್ಬರನ್ನು ಭೀಕರವಾಗಿ ಕೊಂದು ನಗರವನ್ನು ತಲ್ಲಣಗೊಳಿಸಿದ್ದ ಆರೋಪಿ ಮರಣದಂಡನೆಗೆ ಗುರಿಯಾಗಿದ್ದಾನೆ.

ಆರೋಪಿ ಸಿದ್ಧಾರೂಡ(30) ಎಂಬಾತನಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಗುರುವಾರ ಮರಣ ದಂಡನೆ ವಿಧಿಸಿದೆ. ಈ ಪ್ರಕರಣದಲ್ಲಿ ಕೊಲೆಮಾಡಲು ಸಹಕರಿಸಿದ ಮತ್ತೊಬ್ಬ ಆರೋಪಿ ತಿಪ್ಪೇಸ್ವಾಮಿ(30)ಗೆ ಜೀವಾವಧಿ ಶಿಕ್ಷೆ ಹಾಗೂ 20,000 ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶ ಎಂ.ಜಿ.ಸುಧೀಂದ್ರ ತೀರ್ಪು ನೀಡಿದರು.

ಘಟನೆಯ ಹಿನ್ನೆಲೆ : ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಉಪ ವಿಭಾಗದ ಸಹಾಯಕ ಇಂಜಿನಿಯರ್‌ ಆಗಿದ್ದ ಸಿ.ವಿ.ರವಿ ಅವರು 2003ರ ಜನವರಿ 23ರಂದು ಹತ್ಯೆಗೀಡಾಗಿದ್ದರು. ಹಾಡುಹಗಲೇ ಲಕ್ಷ್ಮೀಸಾಗರ ಗ್ರಾಮದ ಜಮೀನೊಂದರಲ್ಲಿ ಸಿದ್ಧಾರೂಢ ಹಾಗೂ ಅವನ ಸಹಚರ ತಿಪ್ಪೇಸ್ವಾಮಿ ಕತ್ತು ಕೊಯ್ದು, ಕತ್ತಿಯಿಂದ ಹಲ್ಲೆಮಾಡಿ ಭೀಕರವಾಗಿ ಹತ್ಯೆ ಮಾಡಿದ್ದರು.

ಸಿದ್ಧಾರೂಢನ ತಂದೆ ಹನುಮಂತಪ್ಪ ಗುತ್ತಿಗೆ ಕೆಲಸ ಮಾಡುತ್ತಿದ್ದ. ತಂದೆಯ ಜತೆ ಸಿದ್ಧಾರೂಢ ಸಹ ಚಿಕ್ಕಪುಟ್ಟ ಗುತ್ತಿಗೆ ಕೆಲಸ ಮಾಡುತ್ತಿದ್ದ. ಇಂಜಿನಿಯರ್‌ ರವಿಯವರಿಗೆ ಗುತ್ತಿಗೆ ನೀಡುವಂತೆ ಆಗಾಗ ಪೀಡಿಸುತ್ತಿದ್ದ. ರವಿ ಕೆಲಸ ನೀಡದ ಕಾರಣ ಈ ದುಷ್ಕೃತ್ಯವನ್ನು ಸಿದ್ಧಾರೂಢ ಮತ್ತು ಅವನ ಸಹಚರ ಎಸಗಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X